CrimeDistricts

ಮಾನಸಿಕ ಖಿನ್ನತೆಯಿಂದ ಆಟೋ ಚಾಲಕ ಆತ್ಮಹತ್ಯೆ!

ವಿಜಯನಗರ; ಮಾನಸಿಕ ಖಿನ್ನತೆಯಿಂದ ಬಳಲುತಿದ್ದ ವ್ಯಕ್ತಿಯೊಬ್ಬರು ವಿಜನಗರ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.. ಇಲ್ಲಿ ಲೊಟ್ಟನಕೆರೆ ಗ್ರಾಮದಲ್ಲಿ ಮರವೊಂದಕ್ಕೆ ನೇಣು ಬಿಗಿದುಕೊಂಡು ಆಟೋ ಚಾಲಕ ಪ್ರಕಾಶ್‌ ಆತ್ಮಹತ್ಯೆಗೆ ಶರಣಾಗಿದ್ದಾರೆ.. ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ ಪ್ರಕಾಶ್‌ಗೆ ಹಗಲು-ರಾತ್ರಿ ಸರಿಯಾಗಿ ನಿದ್ದೆ ಬರುತ್ತಿರಲಿಲ್ಲ.. ಇದರಿಂದ ಅವರು ತೀವ್ರವಾಗಿ ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿದುಬಂದಿದೆ..

ಮಾನಸಿಕ ಕಾಯಿಲೆಗೆ ಶಿವಮೊಗ್ಗದ ಮಾನಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.. ಆದರೂ ಅವರು ಖಿನ್ನತೆಯಲ್ಲೇ ಇದ್ದರು.. ಇದೇ ಕಾರಣಕ್ಕೆ ಅವರು ಗ್ರಾಮದ ಹೊರಗೆ ಇರುವ ಬೇವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.. ತನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಪ್ರಕಾಶ್‌ ಡೆತ್‌ನೋಟ್‌ ಕೂಡಾ ಬರೆದಿಟ್ಟಿದ್ದಾರೆ..

 

Share Post