BengaluruCrime

ಮತ್ತದೇ ಮುಸುಕಧಾರಿಗಳ ಕೈಚಳಕ; 40 ಲಕ್ಷ ರೂಪಾಯಿ ದರೋಡೆ..!

ಬೆಂಗಳೂರು; ಎರಡು ತಿಂಗಳ ಹಿಂದಷ್ಟೇ ಬೆಂಗಳೂರಿನ ಕೊಡಿಗೇಹಳ್ಳಿಯಲ್ಲಿ ಮುಸುಕುಧಾರಿಗಳು ಮನೆಯವರನ್ನು ಬೆದರಿಸಿ 2 ಕೋಟಿ ರೂಪಾಯಿ ನಗ-ನಾಣ್ಯ ದೋಚಿದ್ದರು.. ಇದೀಗ ಅದೇ ಮತ್ತೊಂದು ಮನೆ ದರೋಡೆ ಮಾಡಿದೆ.. ಈ ಬಾರಿ 40 ಲಕ್ಷ ರೂಪಾಯಿ ಕಿತ್ತು ಪರಾರಿಯಾಗಿದೆ.. ಬೆಂಗಳೂರಿನ ಸಹಕಾರ ನಗರದ ಕಾವೇರಿ ಶಾಲೆ ಹಿಂಭಾಗದಲ್ಲಿ ಈ ಘಟನೆ ನಡೆದಿದೆ..

ಗನ್‌ ತೋರಿಸಿ ಬೆದರಿಸಿ ದರೋಡೆ;

ಕಳೆದ ರಾತ್ರಿ 8.30ರ ಸುಮಾರಿಗೆ ಸಹಕಾರನಗರದ ಡಾ.ಉಮಾಶಂಕರ್‌ ಮನೆಗೆ ಕಳ್ಳರು ನುಗ್ಗಿದ್ದಾರೆ.. ಮಾಸ್ಕ್‌ ಧರಿಸಿದ್ದ ಗುಂಪು, ಮನೆಯಲ್ಲಿದ್ದ 40 ಲಕ್ಷ ರೂಪಾಯಿ ದರೋಡೆ ಮಾಡಿದೆ..

ವರ್ನಾ ಕಾರಿನಲ್ಲಿ ಬಂದಿದ್ದ ದರೋಡೆಕೋರರು;

ದರೋಡೆಕೋರರು ವರ್ನಾ ಕಾರಿನಲ್ಲಿ ಬಂದಿದ್ದರು.. ಮನೆಯಲ್ಲಿ ಯಾರೂ ಇಲ್ಲದ್ದನ್ನು ನೋಡಿಕೊಂಡು ಮನೆಗೆ ಎಂಟ್ರಿ ಕೊಟ್ಟಿದ್ದರು.. ಆದ್ರೆ ಹಣ ಕಳವು ಮಾಡಿ ವಾಪಸ್‌ ಹೋಗಬೇಕು ಎನ್ನುವಷ್ಟರಲ್ಲಿ ಮನೆಯ ಯಜಮಾನ ಬಂದಿದ್ದಾರೆ.. ಆಗ ದರೋಡೆಕೋರರು ಗನ್‌ ತೋರಿಸಿ ಅವರನ್ನು ಬೆದರಿಸಿದ್ದಾರೆ.. ಅಲ್ಲಿಂದ ಎಸ್ಕೇಪ್‌ ಆಗಿದ್ದಾರೆ..

ಹಿಂದೆಯೇ ಅದೇ ಕಾರಿನಲ್ಲಿ ಬಂದಿದ್ದರು;

ಎರಡು ತಿಂಗಳ ಹಿಂದೆ ಅದೇ ವರ್ನಾ ಕಾರಿನಲ್ಲಿ ಬಂದಿದ್ದ ದರೋಡೆಕೋರರು ಕೊಡಿಗೇಹಳ್ಳಿಯ ಮನೆಯೊಂದಕ್ಕೆ ಮುಗ್ಗಿ ದರೋಡೆ ಮಾಡಿದ್ದರು.. ಈಗ ಅದೇ ಗ್ಯಾಂಗ್‌ ಮತ್ತೊಂದು ದರೋಡೆ ಮಾಡಿದೆ.. ಅದೂ ಕೂಡಾ ಎರಡೂ ಅಕ್ಕಪಕ್ಕದ ಏರಿಯಾಗಳಲ್ಲೇ ನಡೆದಿವೆ.. ಉತ್ತರ ಪ್ರದೇಶದ ಗ್ಯಾಂಗ್‌ನಿಂದ ಈ ಕೃತ್ಯ ನಡೆದಿರಬಹುದು ಎಂದು ಶಂಕಿಸಲಾಗಿದೆ..

 

Share Post