BengaluruCrime

ಬೈಕ್‌ ಸವಾರನಿಗೆ ಥಳಿತ ಪ್ರಕರಣ; ಬಿಎಂಟಿಸಿ ಚಾಲಕ ಅಮಾನತು

ಬೆಂಗಳೂರು; ಮಧ್ಯದ ಬೆರಳು ತೋರಿಸಿದ್ದಕ್ಕೆ ಬೈಕ್‌ ಸವಾರನನ್ನು ಬಿಎಂಟಿಸಿ ಚಾಲಕ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಯಲಹಂಕ ಮಾರ್ಗದಲ್ಲಿ ಈ ಘಟನೆ ನಡೆದಿದ್ದು, ಸದ್ಯ ಬಿಎಂಟಿಸಿ ಚಾಲಕನನ್ನು ಅಮಾನತು ಮಾಡಲಾಗಿದೆ.

ಬೈಕ್‌ ಚಾಲಕ ಬಿಎಂಟಿಸಿ ಬಸ್‌ಗೆ ಜಾಗ ಬಿಡದೆ ತೊಂದರೆ ಕೊಡುತ್ತಿದ್ದ. ಇದರಿಂದ ಆಕ್ರೋಶಗೊಂಡ ಬಸ್‌ ಚಾಲಕ, ಬೈಕ್‌ ಸವಾರನಿಗೆ ಬೈದಿದ್ದಾರೆ. ಇದ್ರಿಂದ ಕುಪಿತನಾದ ಬೈಕ್‌ ಸವಾರ ಬಸ್‌ ಹತ್ತಿ ಮಧ್ಯದ ಬೆರಳು ತೋರಿಸಿ ನಿಂದಿಸಿದದಾನೆ. ಇದ್ರಿಂದ ರೊಚ್ಚಿಗೆದ್ದ ಚಾಲಕ, ಬೈಕ್‌ ಸವಾರನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಬಸ್‌ ಚಾಲಕ ಹಲ್ಲೆ ಮಾಡಿರುವುದಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ಎಚ್ಚೆತ್ತ ಬಿಎಂಟಿಸಿ, ಚಾಲಕನನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ.

 

Share Post