CinemaCrime

ಮೀಟೂ ಆರೋಪ ಮಾಡಿದ್ದಕ್ಕೆ ತುಳಿದು ಬಿಟ್ರು; ನಟಿ ತನುಶ್ರೀ ದತ್ತ ಅಳಲು

ಮುಂಬೈ; ಮೊದಲ ಮೀಟೂ ಆರೋಪ ಮಾಡಿ ಸಾಕಷ್ಟು ಸದ್ದು ಮಾಡಿದ್ದ ನಟಿ ತನುಶ್ರೀ ದತ್ತ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಮೀಟೂ ಆರೋಪ ಮಾಡಿದ್ದಕ್ಕಾಗಿ ಬಾಲಿವುಡ್‌ ಮಾಫಿಯಾದಿಂದ ಸಂಕಷ್ಟಗಳನ್ನು ಅನುಭವಿಸುತ್ತಿದ್ದೇನೆ ಎಂದು ತನುಶ್ರೀ ಅಳಲು ತೋಡಿಕೊಂಡಿದ್ದಾರೆ. 

ತನುಶ್ರೀ ದತ್ತ ಅವರು ಮೊದಲ ಬಾರಿಗೆ ಬಾಲಿವುಡ್ ನಲ್ಲಿ ಮೀಟೂ ಬಿರುಗಾಳಿಯನ್ನು ಎಬ್ಬಿಸಿದ್ದರು.  ಬಾಲಿವುಡ್ ನ ಅನೇಕ ಕಲಾವಿದರ ಮತ್ತು ತಂತ್ರಜ್ಞರ ಬಣ್ಣ ಬಯಲು ಮಾಡಿದ್ದರು. ಈ ಕುರಿತು ಅವರು ಕಾನೂನು ಕ್ರಮಕ್ಕೂ ಮುಂದಾಗಿದ್ದರು. ಇದಾದ ನಂತರ ಅವರು ಸಾಕಷ್ಟು ಕಿರುಕುಳಕ್ಕೆ ಒಳಗಾಗಿದ್ದಾರಂತೆ. ಅವರನ್ನು ಬಾಲಿವುಡ್‌ ಮಾಫಿಯಾ ಬೆಳೆಯೋದಕ್ಕೆ ಬಿಡುತ್ತಿಲ್ಲವಂತೆ. ಇದ್ರಿಂದ ತನುಶ್ರೀ ಸಾಕಷ್ಟು ಬೇಜಾರಾಗಿದ್ದಾರೆ.

ಬಾಲಿವುಡ್ ಮಾಫಿಯಾದಿಂದ ಬಿಡಿಸಿಕೊಳ್ಳುವುದು ಅಷ್ಟೊಂದು ಸುಲಭವಲ್ಲ. ಅವರು ಹೇಳಿದಂತೆ ಕೇಳಿದರೆ, ಯಾರು ಬೇಕಾದರೂ ಸ್ಟಾರ್ ನಟಿಯರು ಆಗಬಹುದು ಎಂದು ತನುಶ್ರೀ ದತ್ತ ಆಕ್ರೋಶ ಹೊರಹಾಕಿದ್ದಾರೆ.  ಯಾವುದೇ ಮಾಫಿಯಾಗೂ ನಾನು ತಲೆಬಾಗದೇ ಇರುವ ಕಾರಣಕ್ಕಾಗಿ ನಾನಾ ರೀತಿಯ ಕಿರುಕುಳ ಅನುಭವಿಸಬೇಕಾಯಿತು ಎಂದು ತನುಶ್ರೀ ಹೇಳಿಕೊಂಡಿದ್ದಾರೆ.

 

 

Share Post