CrimePolitics

100 ಕೋಟಿ ರೂಪಾಯಿ, ನಾಲ್ವರು ಸಚಿವರು; ದೇವರಾಜೇ ಗೌಡ   ಬಿಚ್ಚಿಟ್ಟ ರಹಸ್ಯವೇನು..?

ಹಾಸನ; ಪ್ರಧಾನಿ ಮೋದಿ, ಕುಮಾರಸ್ವಾಮಿ ಹಾಗೂ ಬಿಜೆಪಿಗೆ ಕೆಟ್ಟ ಹೆಸರು ತರಲು‌‌ ನನಗೆ ಡಿ.ಕೆ.ಶಿವಕುಮಾರ್ 100 ಕೋಟಿ ರೂಪಾಯಿ ಆಫರ್ ನೀಡಿದ್ದರು. 5 ಕೋಟಿ ರೂಪಾಯಿ ಅಡ್ವಾನ್ಸ್ ಕೂಡಾ ಕಳುಹಿಸಿಕೊಟ್ಟಿದ್ದರು ಎಂದು ವಕೀಲ ದೇವರಾಜೇಗೌಡ ಗಂಭೀರ ಆರೋಪ ಮಾಡಿದ್ದಾರೆ..

  ಎಸ್ಐಟಿ ಕಸ್ಟಡಿಯಲ್ಲಿರುವ ದೇವರಾಜೇಗೌಡರನ್ನು ಇಂದು ಕೋರ್ಟ್ ಗೆ ಹಾಜರುಪಡಿಸಲಾಗಿತ್ತು.. ಇದೇ ವೇಳೆ ಮಾತನಾಡಿರುವ ದೇವರಾಜೇಗೌಡರು, ಅಶ್ಲೀಲ ವಿಡಿಯೋ ಪ್ರಕರಣದ ಹಿಂದೆ ಡಿಸಿಎಂ ಡಿ.ಕೆ. ಶಿವಕುಮಾರ್ ಕೈವಾಡ ಇದೆ ಎಂದು ಆರೋಪಿಸಿದರು.

  ಮೊದಲು‌ ನನ್ನ ವಿರುದ್ಧ ಲೈಂಗಿಕ ಕಿರುಕುಳ ಕೇಸ್ ಹಾಕಿಸಿದರು.. ಅದಕ್ಕೆ ಸಾಕ್ಷ್ಯ ಸಿಗಲಿಲ್ಲ.. ಹೀಗಾಗಿ ಅತ್ಯಾಚಾರ ಕೇಸ್ ಹಾಕಿಸಿದ್ದಾರೆ.. ಅದರಲ್ಲೂ ಸಾಕ್ಷ್ಯ ಸಿಕ್ಕಿಲ್ಲ.. ಹೀಗಾಗಿ ನನ್ನ ಮಟ್ಟ ಹಾಕಲು ಪೆನ್ಡ್ರಾವ್ ಕೇಸ್ ನಲ್ಲಿ ಲಾಕ್ ಮಾಡಿಸಿದ್ದಾರೆ ಎಂದು ದೇವರಾಜೇಗೌಡ ಆರೋಪ ಮಾಡಿದ್ದಾರೆ..

ಇದೆಲ್ಲದರ ಹಿಂದೆ ಡಿಸಿಎಂ ಡಿ.ಕೆ.ಶಿವಕುಮಾರ್ ಕೈವಾಡ ಇದೆ ಎಂದು ಆರೋಪ ಮಾಡಿರುವ ದೇವರಾಜೇಗೌಡ, ಡಿ.ಕೆ.ಶಿವಕುಮಾರ್ ಅವರನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ಗುಡುಗಿದ್ದಾರೆ..

ಡಿ.ಕೆ.ಶಿವಕುಮಾರ್ ಅವರು ನಾಲ್ವರು ಸಚಿವರ ಕಮಿಟಿಯನ್ನು ನೇಮಕ ಮಾಡಿದ್ದಾರೆ.. ಇದರಲ್ಲಿ ಚೆಲುವರಾಯಸ್ವಾಮಿ, ಕೃಷ್ಣಭೈರೇಗೌಡ, ಪ್ರಿಯಾಂಕ್ ಖರ್ಗೆ ಹಾಗೂ ಮತ್ತೊಬ್ಬ ಸಚಿವ ಇದ್ದಾರೆ ಎಂದೂ ಬಾಂಬ್ ಸಿಡಿಸಿದ್ದಾರೆ..

 

Share Post