CrimeDistricts

ಶ್ರೀಮಂತ ಯುವತಿಯನ್ನು ಮದುವೆಯಾಗಿದ್ದಕ್ಕೆ ಯುವಕನಿಗೆ ಜೀವ ಬೆದರಿಕೆ!

ಚಿಕ್ಕಬಳ್ಳಾಪುರ; ಶ್ರೀಮಂತ ಯುವತಿಯನ್ನು ಮದುವೆಯಾಗಿದ್ದಕ್ಕೆ ಆಕೆಯ ಪೋಷಕರು ಯುವಕನಿಗೆ ಜೀವ ಬೆದರಿಕೆ ಹಾಕಿದ್ದಾರೆಂಬ ಆರೋಪ ಮಾಡಲಾಗಿದೆ.. ಈ ಸಂಬಂಧ ನವಜೋಡಿ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯನ್ನು ಭೇಟಿಯಾಗಿ ರಕ್ಷಣೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ..
ದೇವನಹಳ್ಳಿ ಬಳಿಯ ಹೊಸೂರು ಗ್ರಾಮ ವಿಜಯ್‌ ಕುಮಾರ್‌ ಎಂಬಾತ ಬೆಂಗಳೂರಿನ ಅಮೃತಹಳ್ಳಿಯ ಹಂಸಲೇಖಾಳನ್ನು ಪ್ರೀತಿಸಿ ಮದುವೆಯಾಗಿದ್ದಾನೆ.. ಹಂಸಲೇಖಾ ಶ್ರೀಮಂತ ಮನೆತನದ ಹುಡುಗಿಯಾಗಿದ್ದು, ಈ ಮದುವೆಗೆ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು.. ಆದ್ರೆ ಇಬ್ಬರೂ ಓಡಿಹೋಗಿ ಮದುವೆಯಾಗಿದ್ದಾರೆ.. ಆದ್ರೆ ಹಂಸಲೇಖಾ ಪೋಷಕರು ಜೀವಬೆದರಿಕೆ ಹಾಕುತ್ತಿದ್ದಾರೆ ಎಂದು ನವಜೋಡಿ ಆರೋಪ ಮಾಡಿದೆ..
ಇಬ್ಬರೂ ಬೇರೆ ಜಾತಿಯವರಾಗಿದ್ದಾರೆ.. ಜೊತೆಗೆ ಹಂಸಲೇಖಾ ವಯಸ್ಸು 21 ಆದರೆ, ವಿಜಯ್‌ ಕುಮಾರ್‌ ವಯಸ್ಸು 39 ಇದೆ.. ಹೀಗಾಗಿ ಈ ಮದುವೆ ಬೇಡ ಎಂದು ಹಂಸಲೇಖಾ ಪೋಷಕರು ಹೇಳಿದ್ದರಂತೆ. ಆದರೆ ಹಂಸಲೇಖಾ ಇದನ್ನು ದಿಕ್ಕರಿಸಿ ಪ್ರೀತಿಸಿದವನನ್ನು ಮದುವೆಯಾಗಿದ್ದಾಳೆ ಎಂದು ತಿಳಿದುಬಂದಿದೆ..
ವಿಜಯ್‌ ಕುಮಾರ್‌ ಫೋಟೋ ಗ್ರಾಫರ್‌ ಆಗಿ ಕೆಲಸ ಮಾಡುತ್ತಾನೆ.. ಆರ್ಥಿಕವಾಗಿ ಸ್ಟೇಬಲ್‌ ಇಲ್ಲ.. ಹೀಗಾಗಿ ಮದುವೆ ಬೇಡ ಎಂದು ಹಂಸಲೇಖಾ ಪೋಷಕರು ಹೇಳಿದ್ದಂರೆಂದು ತಿಳಿದುಬಂದಿದೆ.. ಆದ್ರೆ ನನಗೆ ಆಸ್ತಿ ಹಣಕ್ಕಿಂತ ಪ್ರೀತಿ ಮುಖ್ಯ ಎಂದು ಹಂಸಲೇಖಾ ಹೇಳಿದ್ದಾಳೆ.. ಈ ಬಗ್ಗೆ ಮಾತನಾಡಿರುವ ಹಂಸಲೇಖಾ, ನನ್ನ ತಂದೆ ಮೃತಪಟ್ಟಿದ್ದಾರೆ.. ನನ್ನ ಮಾವಂದಿರುವ ಪ್ರಭಾವಿ ರಾಜಕಾರಣಿಗಳಾಗಿದ್ದು, ನಮಗೆ ಜೀವ ಬೆದರಿಕೆ ಹಾಕಿದ್ದಾರೆ. ನನ್ನ ಹೆಸರಿನಲ್ಲಿರುವ ಎಲ್ಲಾ ಆಸ್ತಿ ಬರೆದುಕೊಡುವಂತೆ ಕೇಳಿದ್ದಾರೆ ಎಂದು ಆರೋಪ ಮಾಡಿದ್ದಾರೆ..

Share Post