CrimeNational

ಪತ್ನಿಯ ಆಸೆಯಂತೆ ಚೆನ್ನಾಗಿ ಓದಿಸಿದ ಗಂಡ; ಸರ್ಕಾರಿ ಕೆಲಸ ಸಿಕ್ಕಿದ ಮೇಲೆ ಕೈಕೊಟ್ಟ ಹೆಂಡತಿ!

ಝಾನ್ಸಿ; ಬಡಗಿ ಕೆಲಸ ಮಾಡುವ ವ್ಯಕ್ತಿಯೊಬ್ಬ ವಿದ್ಯಾವಂತ ಹುಡುಗಿಯನ್ನು ಮದುವೆಯಾಗಿದ್ದ. ಆಕೆ ಮದುವೆಯಾದ ಮೇಲೆ ಓದಿ ಸರ್ಕಾರಿ ಕೆಲಸಕ್ಕೆ ಸೇರಬೇಕೆಂದು ಆಸೆಪಟ್ಟಿದ್ದಳು.. ಅದರಂತೆ ಗಂಡ ತನ್ನ ಹೆಂಡತಿಯನ್ನು ಚೆನ್ನಾಗಿ ಓದಿಸಿ ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳುವಂತೆ ಮಾಡಿದ್ದಾನೆ.. ಇದೀಗ ಸರ್ಕಾರಿ ಉದ್ಯೋಗ ಸಿಕ್ಕ ಕೂಡಲೇ ಆ ಮಹಿಳೆ ಗಂಡನನ್ನು ತೊರೆದಿದ್ದಾಳೆ.. ಈಗ ಗಂಡ ನ್ಯಾಯಕ್ಕಾಗಿ ಜಿಲ್ಲಾಧಿಕಾರಿಯ ಮೊರೆ ಹೋಗಿದ್ದಾರೆ.. ಉತ್ತರ ಪ್ರದೇಶದ ಝಾನ್ಸಿಯಲ್ಲಿ ಈ ಘಟನೆ ನಡೆದಿದೆ..

ಇದನ್ನೂ ಓದಿ; ಇಲ್ಲಿ ಕುಡಿದು ಟೈಟಾದರೆ ಬಾರ್‌ನವರೇ ಉಚಿತವಾಗಿ ಮನೆಗೆ ಬಿಡ್ತಾರಂತೆ!

ಬಡಗಿ ನೀರಜ್‌ ವಿಶ್ವಕರ್ಮ ಎಂಬುವವರು ರಿಚಾ ಸೋನಿ ವಿಶ್ವಕರ್ಮ ಅವರನ್ನು ಮದುವೆಯಾಗಿದ್ದರು.. ಇದೇ ವೇಳೆ ರಿಚಾ ತಾನು ಕಾಂಪಿಟೇಟಿವ್‌ ಎಕ್ಸಾಂ ಬರೆಯಬೇಕು.. ಅದಕ್ಕಾಗಿ ಕೋಚಿಂಗ್‌ ಪಡೆಯಬೇಕು ಎಂದು ಹೇಳಿದ್ದಳು.. ಇದಕ್ಕೆ ಸಹಕರಿಸಿದ ಗಂಡ, ಆಕೆಗೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿದ್ದ.. ಇದೀಗ ರಿಚಾ ಲೆಕ್ಕ ಪರಿಶೀಲನಾ ಅಧಿಕಾರಿಯಾಗಿ ನೇಮಕವಾಗಿದ್ದಾಳೆ.. ಸರ್ಕಾರಿ ಕೆಲಸ ಸಿಕ್ಕ ಕೂಡಲೇ ರಿಚಾ ಗಂಡನನ್ನು ತೊರೆದಿದ್ದಾಳೆ.. ಇದರಿಂದಾಗಿ ಗಂಡ ನೀರಜ್‌ ವಿಶ್ವಕರ್ಮ ಸಂಕಷ್ಟ ಅನುಭವಿಸುತ್ತಿದ್ದಾರೆ.. ನಾನು ಕಷ್ಟಪಟ್ಟು ಓದಿಸಿದ್ದೇನೆ.. ಈಗ ಅವಳು ಬಿಟ್ಟು ಹೋಗಿದ್ದಾಳೆ.. ನನಗೆ ನ್ಯಾಯ ಬೇಕು ಎಂದು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾನೆ.

ಇದನ್ನೂ ಓದಿ; ಸಿದ್ದರಾಮಯ್ಯಗೆ ಕಂಟಕವಾಗುತ್ತಾ ಮೂಡಾ ಹಗರಣ..?; ಪಾದಯಾತ್ರೆಗೆ ರಾಜ್ಯ ಬಿಜೆಪಿ ಸಿದ್ಧತೆ..!

ಈ ಹಿಂದೆ ಜ್ಯೋತಿ ಮೌರ್ಯ ಎಂಬಾಕೆ ಕೂಡಾ ಇದೇ ರೀತಿ ವರ್ತಿಸಿದ್ದಳು.. ಜ್ಯೋತಿ ಪತಿ ಕ್ಲಾಸ್‌-೪ ಸರ್ಕಾರಿ ನೌಕರನಾಗಿದ್ದ, ಜ್ಯೋತಿಯನ್ನು ಐಎಎಸ್‌ ಮಾಡಲು ಸಪೋರ್ಟ್‌ ಮಾಡಿದ್ದ.. ಆಕೆಯ ಓದಿಗಾಗಿ ತನ್ನ ಸರ್ವಸ್ವವನ್ನೂ ತ್ಯಾಗ ಮಾಡಿದ್ದ.. ಕೆಲಸ ಸಿಕ್ಕ ಬಂತರ ಜ್ಯೋತಿ ಮೌರ್ಯ ಕೂಡಾ ತನ್ನ ಗಂಡನನ್ನು ಬಿಟ್ಟುಹೋಗಿದ್ದಳು.. ಇದೀಗ ಇಂತಹದೇ ಒಂದು ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ..

Share Post