CrimeDistricts

ಚಲಿಸುತ್ತಿದ್ದ ರೈಲಿನ ಮೇಲೆ ಉರುಳಿಬಿತ್ತು ಮರ; ತಪ್ಪಿದ ಅನಾಹುತ!

ಮಂಡ್ಯ; ಕಳೆದ ರಾತ್ರಿ ಮಂಡ್ಯ ಸುತ್ತಮುತ್ತ ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ.. ಇದರಿಂದಾಗಿ ಹಲವೆಡೆ ಅನಾಹುತಗಳು ನಡೆದಿದೆ.. ಇನ್ನು ಮಂಡ್ಯದ ಬಳಿ ಚಲಿಸುತ್ತಿದ್ದ ರೈಲಿನ ಮೇಲೆ ಮರವೊಂದು ಉರುಳಿಬಿದ್ದಿದೆ.. ಇದರಿಂದಾಗಿ ಕೆಲಕಾಲ ರೈಲು ಸಂಚಾರಕ್ಕೆ ತೊಂದರೆಯಾಗಿತ್ತು..

ಮಂಡ್ಯದ ಉಮ್ಮಡಹಳ್ಳಿ ಗೇಟ್‌ ಬಳಿ ಬೆಂಗಳೂರಿಂದ ಮೈಸೂರಿಗೆ ತೆರಳುತ್ತಿದ್ದ ವಿಶ್ವಮಾನವ ಎಕ್ಸ್‌ಪ್ರೆಸ್‌ ರೈಲಿನ ಮೇಲೆ ಮರ ಉರುಳಿಬಿದ್ದಿದೆ.. ರೈಲಿನ ಲೋಕೋಪೈಲಟ್‌ ಕೂರುವ ಸ್ಥಳದಲ್ಲಿ ಮರ ಬಿದ್ದು ಲೋಕೋಪೈಲಟ್‌ ಗಾಯಗೊಂಡಿದ್ದಾರೆ.. ಗಾಜುಗಳು ಪುಡಿಪುಡಿಯಾಗಿದೆ.. ಗಾಯಗೊಂಡಿದ್ದರೂ ಕೂಡಾ ಲೋಕೋ ಪೈಲಟ್‌ ರೈಲನ್ನು ನಿಯಂತ್ರಣಕ್ಕೆ ತಂದಿದ್ದಾರೆ.. ಅನಂತರ ರೈಲನ್ನು ಮಂಡ್ಯ ರೈಲು ನಿಲ್ದಾಣದವರೆಗೂ ತಂದಿದ್ದಾರೆ.. ಅಲ್ಲಿ ಒಡೆದ ಗ್ಲಾಸ್‌ ಬದಲಾಯಿಸಿ ರೈಲು ಸಂಚಾರ ಆರಂಭಿಸಲಾಗಿದೆ..

ಲೋಕೋಪೈಲಟ್‌ ಬದಲಾವಣೆ ಮಾಡಲಾಗಿದ್ದು, ಗಾಯಾಳು ಲೋಕೋ ಪೈಲಟ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ..

 

Share Post