BengaluruCrime

ಕೆಇಎ ಪರೀಕ್ಷೆ ಅಕ್ರಮ; ಆರ್​ಡಿ ಪಾಟೀಲ್ ಬಂಧನವಾದ್ರೆ ಪ್ರಿಯಾಂಕ್‌ ಹೆಸರು ಹೊರಬರುವ ಆಂತಕ – ಬಿಜೆಪಿ

ಬೆಂಗಳೂರು; ಕೆಇಎ ಪರೀಕ್ಷೆ ಅಕ್ರಮ ಪ್ರಕರಣದ ಕಿಂಗ್​ಪಿನ್ ಆರ್​.ಡಿ.ಪಾಟೀಲ್ ಪೊಲೀಸರಿಗೆ ತಪ್ಪಿಸಿಕೊಂಡಿದ್ದಾರೆ. ಕಾಂಪೌಂಡ್‌ ಹಾರಿ ಪರಾರಿಯಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಟ್ವಿಟರ್‌ ಖಾತೆಯಲ್ಲಿ ಸರಣಿ ಟ್ವೀಟ್‌ ಮಾಡಿದೆ.  ಆರ್.​ಡಿ.ಪಾಟೀಲ್ ಬಂಧನವಾದ್ರೆ ಸಚಿವ ಪ್ರಿಯಾಂಕ್ ಖರ್ಗೆ ಹೆಸರು ಹೊರಬರೋ ಆತಂಕ ಈ ಎಟಿಎಂ ಸರ್ಕಾರಕ್ಕಿದೆ ಎಂದು ಬಿಜೆಪಿ ಆರೋಪ ಮಾಡಿದೆ.

ನೇಮಕಾತಿ ಪರೀಕ್ಷೆಯ ಅಕ್ರಮದ ಕಿಂಗ್‌ಪಿನ್ ಕಾಂಪೌಂಡ್‌ ಹಾರಿ ಪರಾರಿಯಾಗಲು ಸರ್ಕಾರವೇ ಬಿಟ್ಟಿದೆ ಎಂದೂ ಬಿಜೆಪಿ ಆರೋಪ ಮಾಡಿದೆ.

ಮಾನ್ಯ ಗೃಹ ಸಚಿವ ಜಿ ಪರಮೇಶ್ವರ ಸಾಹೇಬರೇ, ಯಾರಿಗಾಗಿ ಯಾರಿಗೋಸ್ಕರ ಕಿಂಗ್ ಪಿನ್ ಆರ್​ಡಿ ಪಾಟೀಲ್ ಅವರನ್ನು ಬಂಧಿಸದೆ ಕಳ್ಳಾಟವಾಡುತ್ತಿದ್ದೀರಿ? ಆತನ ಬಂಧನವಾದರೆ ಪ್ರಿಯಾಂಕ್ ಖರ್ಗೆ ಹೆಸರು ಹೊರ ಬರಲಿದೆ ಎನ್ನುವ ಆತಂಕ #ATMSarkaraಕ್ಕೆ ಇದ್ದಂತಿದೆ.

ಎಂದು ಟ್ವೀಟ್‌ ಮಾಡಲಾಗಿದೆ.

 

Share Post