Crime

ಹಸು ಕಳ್ಳಸಾಗಾಣೆ; ಸಿಆರ್‌ಪಿಎಫ್‌ ಯೋಧರ ಗುಂಡಿಗೆ ಆರೋಪಿ ಬಲಿ

ಕೂಚ್‌ ಬೇಹರ್‌: ಇಲ್ಲಿನ ಜರಿದಾರ್ಲಾ ಪ್ರದೇಶದಲ್ಲಿ ಹಸು ಕಳ್ಳಸಾಗಣೆ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಸಿಆರ್‌ಪಿಎಫ್‌ ಯೋಧರು ಗುಂಡಿಕ್ಕಿ ಕೊಂದಿದ್ದಾರೆ. ಗುರುವಾರ ಬೆಳಗ್ಗೆ,  ಗಿತಾಲ್ದಾ ಪ್ರದೇಶದ ಪೂರ್ವ ಜರಿಧರ್ಲಾ ಗಡಿಯಲ್ಲಿ ಜಾನುವಾರುಗಳನ್ನು ಕಳ್ಳಸಾಗಣೆ ಮಾಡಲು ಯತ್ನಿಸಲಾಗುತ್ತಿತ್ತು. ಇದಕ್ಕಾಗಿ ಮುಳ್ಳುತಂತಿ ಬೇಲಿಯ ಮುಂದೆ 10 ರಿಂದ 15 ದುಷ್ಕರ್ಮಿಗಳ ಗುಂಪು ಕಾಣಿಸಿಕೊಂಡಿತು. ಈ ವೇಳೆ ಯೋಧರು ಗುಂಡಿನ ದಾಳಿ ನಡೆಸಿದ್ದು, ಅದರಲ್ಲಿ ಒಬ್ಬ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.

ಹಸುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದಾಗ ಯೋಧರು, ಅದನ್ನು ತಡೆದಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಯೋಧರ ಮೇಲೆಯೇ ದಾಳಿ ನಡೆಸಿದ್ದಾರೆ. ಹೀಗಾಗಿ ಯೋಧರು ದುಷ್ಕರ್ಮಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

Share Post