CrimeDistricts

ಕಾಲೇಜು ವಿದ್ಯಾರ್ಥಿನಿಯನ್ನು ಕಾಡಿಗೆ ಕರೆದೊಯ್ದು ಅತ್ಯಾಚಾರ!

ಮಂಗಳೂರು; ಕಾಲೇಜು ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಕಾಡಿಗೆ ಕರೆದೊಯ್ದು ಅತ್ಯಾಚಾರ ಎಸಗಿರುವ ಘಟನೆ ಬೆಳಕಿಗೆ ಬಂದಿದೆ.. ದಕ್ಷಿಣ ಕನ್ನಡ ಜಿಲ್ಲೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ..
ಇನ್ನೂ ಅಪ್ರಾಪ್ತೆಯಾಗಿರುವ ವಿದ್ಯಾರ್ಥಿನಿಯನ್ನು ವಿಟ್ಲ ನಿವಾಸಿ 38 ವರ್ಷದ ಸತೀಶ್‌ ಎಂಬಾತ ಕಾಡಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.. ಆತನ ವಿರುದ್ಧ ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಕೇಸ್‌ ದಾಖಲಾಗಿದೆ. ವಿದ್ಯಾರ್ಥಿನಿ ನೆಲ್ಯಾಡಿಯ ಕಾಲೇಜೊಂದರಲ್ಲಿ ಓದುತ್ತಿದ್ದಾಳೆ. ಜೂನ್‌ 4ರಂದು ಪುತ್ತೂರಿನಲ್ಲಿ ಆರೋಪಿ ಸತೀಶ್‌ ಗೆ ಆಕೆಯ ಪರಿಚಯವಾಗಿದೆ.. ಫೋನ್‌ ಮೂಲಕ ಇಬ್ಬರೂ ಸಂಪರ್ಕ ಸಾಧಿಸಿದ್ದಾರೆ.. ಹಾಗೆಯೇ ಇಬ್ಬರಲ್ಲಿ ಆತ್ಮೀಯತೆ ಬೆಳೆದಿದೆ. ಜುಲೈ 21ರಂದು ನೆಲ್ಯಾಡಿಗೆ ವಿದ್ಯಾರ್ಥಿನಿಯನ್ನು ನೆಲ್ಯಾಡಿಗೆ ಕರೆಸಿಕೊಂಡ ಆರೋಪಿ, ವಾಹನವೊಂದರಲ್ಲಿ ಅಲ್ಲಿಂದ ಪಿಕಪ್‌ ಮಾಡಿದ್ದಾನೆ..
ಬಜತ್ತೂರು ಬಳಿಯ ಕಾಂಚನ ಹತ್ತಿರವಿರುವ ಕಾಡಿಗೆ ಕರೆದೊಯ್ದಿರುವ ಆರೋಪಿ ಅತ್ಯಾಚಾರ ಎಸಗಿದ್ದಾನೆ.. ನಂತರ ಇದನ್ನು ಯಾರಿಗೂ ಹೇಳಬಾರದು, ಹೇಳಿದರೆ ಕೊಂದುಬಿಡುತ್ತೇನೆ ಎಂದು ಬೆದರಿಸಿದ್ದನಂತೆ. ಆದ್ರೆ ಮನೆಗೆ ಹೋದ ಮೇಲೆ ಭಯಗೊಂಡ ವಿದ್ಯಾರ್ಥಿನಿ ಪೋಷಕರಿಗೆ ವಿಷಯ ಮುಟ್ಟಿಸಿದ್ದಾಳೆ.. ಈಗ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ..

Share Post