CrimeNational

ಸತ್ತೇ ಹೋಗ್ತೀವಿ ಅಂದವರು ಹಾಗೇ ಆದರು; ಉತ್ತರ ಪ್ರದೇಶದಲ್ಲಿ ಭೀಕರ ಆಕ್ಸಿಡೆಂಟ್‌

ಲಖನೌ; ಕುಡಿದ ಅಮಲಿನಲ್ಲಿ ಬಿಎಂಡಬ್ಲ್ಯೂ ಕಾರನ್ನು 300 ಕಿಲೋ ಮೀಟರ್‌ ವೇಗದಲ್ಲಿ ಚಲಾಯಿಸುತ್ತಾ, ವಿಡಿಯೋ ಮಾಡುತ್ತಿದ್ದ ಮೂವರು ಯುವಕರು, ಹೀಗೇ ಚಲಾಯಿಸಿದರೆ ಸತ್ತೇ ಹೋಗುತ್ತೇವೇನೋ ಎಂದು ಹೇಳಿದ್ದರು. ಅವರು ಹೇಳಿದಂತೆಯೇ ನಡೆದುಹೋಗಿದೆ. ಅತಿವೇಗದ ಚಾಲನೆಯಿಂದಾಗಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಕಂಟೇನರ್‌ಗೆ ಡಿಕ್ಕಿ ಹೊಡೆದಿದ್ದು, ಚಾಲಕ ಸೇರಿ ನಾಲ್ವರೂ ಪೀಸ್‌ ಪೀಸ್‌ ಆಗಿದ್ದಾರೆ. ಉತ್ತರ ಪ್ರದೇಶದ ಪೂರ್ವಾಂಚಲ್‌ ಎಕ್ಸ್‌ಪ್ರೆಸ್‌ ವೇನ ಸುಲ್ತಾನ್‌ಪುರದಲ್ಲಿ ನಡೆದಿದೆ.

ಬಿಹಾರದ ಆನಂದ್ ಪ್ರಕಾಶ್, ಅಖಿಲೇಶ್ ಸಿಂಗ್, ದೀಪಕ್ ಕುಮಾರ್ ಹಾಗೂ ಮುಕೇಶ್ ಎಂಬುವವರೇ ಮೃತ ದುರ್ದೈವಿಗಳು. ಎಲ್ಲರೂ 30 ವರ್ಷ ವಯಸ್ಸಿನವರೇ ಎಂದು ತಿಳಿದುಬಂದಿದೆ. ಇವರು ಐಶಾರಾಮಿ ಬಿಎಂಡಬ್ಲ್ಯೂ ಕಾರಿನಲ್ಲಿ ಪೂರ್ವಾಂಚಲ್‌ ಎಕ್ಸ್‌ಪ್ರೆಸ್‌ ವೇನಲ್ಲಿ ಸುಲ್ತಾನ್‌ಪುರಕ್ಕೆ ತೆರಳುತ್ತಿದ್ದರು. ಈ ವೇಳೆ ಎಲ್ಲರೂ ಪಾನಮತ್ತರಾಗಿದ್ದರೆಂದು ತಿಳಿದುಬಂದಿದೆ. ಯುವಕರು ಫೇಸ್‌ ಬುಕ್‌ ಲೈವ್‌ ಬಂದು, ಚಾಲಕ ಪ್ರಕಾಶ್‌ನನ್ನು ವೇಗ ಹೆಚ್ಚಿಸುವಂತೆ ಸೂಚಿಸಿದ್ದಾರೆ. ಕಾರು 300 ಕಿಲೋ ಮೀಟರ್‌ ವೇಗ ಪಡೆದುಕೊಂಡಾಗ ಚಾಲಕ ಹೀಗೆ ಹೋದ್ರೆ ನಾವು ನಾಲ್ವರು ಸತ್ತೇ ಹೋಗುತ್ತೇವೆ ಎಂದಿದ್ದಾನೆ. ಇದು ಫೇಸ್‌ಬುಕ್‌ ಲೈವ್‌ ನಲ್ಲಿ ಪ್ರಸಾರವಾಗಿದೆ. ಹೀಗಿರುವಾಗಲೇ ಕಾರು ಕಂಟೇನರ್‌ಗೆ ಡಿಕ್ಕಿ ಹೊಡೆದಿದ್ದು, ನಾಲ್ವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ಭೀಕರತೆ ಎಷ್ಟಿತ್ತೆಂದ್ರೆ ಬಿಎಂಡಬ್ಲೂ ಕಾರು ಸಂಪೂರ್ಣ ಪೀಸ್‌ ಪೀಸ್‌ ಆಗಿದೆ. ಯುವಕರ ದೇಹಗಳು ಛಿದ್ರ ಛಿದ್ರವಾಗಿ ಎಲ್ಲೆಂದರಲ್ಲಿ ಬಿದ್ದಿವೆ.

Share Post