BengaluruPolitics

ವರುಣಾದಲ್ಲಿ ಸಿದ್ದರಾಮಯ್ಯ ನಿಲ್ಲುವುದಾದರೆ ಸ್ವಾಗತ; ಯತೀಂದ್ರ

ಬೆಂಗಳೂರು; ನಮ್ಮ ತಂದೆಯವರು ಯಾವುದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದರೂ ಆ ಕ್ಷೇತ್ರದಲ್ಲಿ ಹಾಲಿ ಇರುವವರು ನಮ್ಮ ತಂದೆಗೆ ಸೀಟು ಬಿಟ್ಟುಕೊಡಲು ಸಿದ್ಧರಿದ್ದಾರೆ. ನನ್ನ ಕ್ಷೇತ್ರದಲ್ಲಿ ನಿಂತರೂ ನಾನೂ ಕೂಡಾ ಬಿಟ್ಟು ಕೊಡಲು ಸಿದ್ಧ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರದಲ್ಲಿ ನಿಲ್ಲುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಯತೀಂದ್ರ ಸಿದ್ದರಾಮಯ್ಯ ಅವರು, ವರುಣ ಕ್ಷೇತ್ರದಲ್ಲಿ ಅಪ್ಪ ನಿಲ್ಲುವುದಾದರೆ ಸ್ವಾಗತ. ನಾನು ಬೇರೆ ಯಾವ ಕ್ಷೇತ್ರದಲ್ಲೂ ಸ್ಪರ್ಧಿಸುವುದಿಲ್ಲ. ಅಪ್ಪನ ಪರವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.

  ಇದನ್ನು ನೋಡಿದರೆ ಸಿದ್ದರಾಮಯ್ಯ ಎಲ್ಲವನ್ನೂ ಬಿಟ್ಟು ವರುಣಾ ಕ್ಷೇತ್ರಕ್ಕೇ ಹೋಗುತ್ತಾರೆ ಎಂಬ ಮಾತುಗಳು ಬಲವಾಗುತ್ತಿವೆ.

Share Post