BengaluruCrime

ರಾಡ್‌ನಿಂದ ಹೊಡೆದು 17ರ ಬಾಲಕನ ಕೊಲೆ!; ಪ್ರೀತಿ ವಿಚಾರಕ್ಕೆ ನಡೀತಾ ಮರ್ಡರ್‌..?

ಬೆಂಗಳೂರು; ಹದಿನೇಳು ವರ್ಷದ ಬಾಲಕನನ್ನು ದಾರುಣವಾಗಿ ಹತ್ಯೆ ಮಾಡಲಾಗಿದೆ.. ತಲೆಗೆ ರಾಡ್‌ ಹೊಡೆದು ಕೊಲೆ ಮಾಡಿರುವ ದುಷ್ಕರ್ಮಿಗಳು ಖಾಲಿ ಜಾಗವೊಂದರಲ್ಲಿ ಶವವನ್ನು ಬಿಸಾಡಿಹೋಗಿದ್ದಾರೆ.. ಬೆಂಗಳೂರಿನ ಗಂಗಮ್ಮಗುಡಿ ಪೊಲೀಸ್‌ ಠಾಣಾ ವ್ಯಾಪ್ತಿಯ ಅಬ್ಬಿಗೆರೆ ಬಳಿ ಈ ಘಟನೆ ಡನೆದಿದೆ.

ಅಬ್ಬಿಗೆರೆ 17 ವರ್ಷದ ಬಾಲಕ ಮಂಜುನಾಥ್‌ ಎಂಬಾತನೆ ಕೊಲೆಯಾದ ಬಾಲಕನಾಗಿದ್ದಾನೆ.. ಕಳೆದ ರಾತ್ರಿ ಬಾಲಕನನ್ನು ಹತ್ಯೆ ಮಾಡಲಾಗಿದೆ.. ರಾಡ್‌ನಲ್ಲಿ ತಲೆಗೆ ತೀವ್ರವಾಗಿ ದಾಳಿ ಮಾಡಿದ್ದರಿಂದ ಮಂಜುನಾಥ್‌ ಸಾವನ್ನಪ್ಪಿದ್ದಾನೆ.. ನಂತರ ದುಷ್ಕರ್ಮಿಗಳು ಶವವನ್ನು ಅಬ್ಬಿಗೆರೆ ಬಳಿ ಖಾಲಿ ಜಾಗದಲ್ಲಿ ಬಿಸಾಕಿಹೋಗಿದ್ದಾರೆ..

ಪ್ರೀತಿ ವಿಚಾರಕ್ಕಾಗಿ ಜಗಳ ನಡೆದು, ಅದು ವಿಕೋಪಕ್ಕೆ ತಿರುಗಿದ್ದರಿಂದ ಈ ಕೊಲೆ ನಡೆದಿದೆ ಎಂದು ಹೇಳಲಾಗುತ್ತಿದೆ.. ಆರೋಪಿಗಳು ಪರಾರಿಯಾಗಿದ್ದಾರೆ.. ಗಂಗಮ್ಮನ ಗುಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.. ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ..

 

Share Post