CrimeDistricts

ರಾತ್ರಿ ಮಗುವಿನ ಅಂತ್ಯಸಂಸ್ಕಾರ; ಬೆಳಗ್ಗೆ ತೊಟ್ಟಿಲಲ್ಲಿ ಮಗು!

ಬೀದರ್; ಅನಾರೋಗ್ಯದಿಂದ ಒಂದೂವರೆ ವರ್ಷದ ಮಗು ಮೃತಪಟ್ಟಿತ್ತು.. ರಾತ್ರಿ ಅಂತ್ಯಸಂಸ್ಕಾರವು ನಡೆದಿತ್ತು.. ಆದ್ರೆ ಬೆಳಗ್ಗೆ ಎದ್ದು ನೋಡಿದರೆ ಮಗುವಿನ ದೇಹ ಉಯ್ಯಾಲೆಯಲ್ಲಿ ಇತ್ತು.. ಈ ಘಟನೆ ನಡೆದಿರೋದು ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದಲ್ಲಿ.. ಈ ದೃಶ್ಯ ನೋಡಿ ಜನ ಬೆಚ್ಚಿಬಿದ್ದಿದ್ದಾರೆ..

  ಮಂಠಾಳ ಗ್ರಾಮದ ಅಂಬಯ್ಯಸ್ವಾಮಿಯವರ ಒಂದೂವರೆ ವರ್ಷದ ಮಗಳು ದೀಪ್ತಿ ಅನಾರೋಗ್ಯದಿಂದ ಜೂನ್ 29ರ ಸಂಜೆ ಸಾವನ್ನಪ್ಪಿದ್ದಳು. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ತಡರಾತ್ರಿ ಮಗುವಿನ ಅಂತ್ಯಸಂಸ್ಕಾರ ಮಾಡಿದ್ದರು. ಆದರೆ ಮರುದಿನ ಬೆಳಗ್ಗೆ ಮರಕ್ಕೆ ಕಟ್ಟಿದ್ದ ಉಯ್ಯಾಲೆಯಲ್ಲಿ ಮಗುವಿನ ಮೃತದೇಹ ಕಾಣಿಸಿಕೊಂಡಿದೆ. ಇದರಿಂದ ಮಗುವಿನ ಪೋಷಕರು ಹಾಗೂ ಗ್ರಾಮಸ್ಥರು ಆತಂಕಗೊಂಡಿದ್ದಾರೆ..

  ಮಗುವನ್ನು ಗುಂಡಿಯಿಂದ ಯಾರು ತೆಗೆದರು ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ.

Share Post