CinemaDistricts

ಸುದೀಪ್‌ ಕಾರ್ಯಕ್ರಮದಲ್ಲಿ ಅಭಿಮಾನಿ ಅನುಚಿತ ವರ್ತನೆ; ಕಪಾಳಮೋಕ್ಷ ಮಾಡಿದ ಲೇಡಿ ಪಿಎಸ್‌ಐ

ರಾಯಚೂರು: ನಟ ಸುದೀಪ್‌ ಆಗಮಿಸಿದ್ದ ಕಾರ್ಯಕ್ರಮದಲ್ಲಿ ವ್ಯಕ್ತಿಯೊಬ್ಬ ಲೇಡಿ ಪಿಎಸ್‌ಐ ಜೊತೆ ಅಸಭ್ಯವಾಗಿ ವರ್ತಿಸಿದ್ದು, ಆ ಲೇಡಿ ಪಿಎಸ್‌ಐ ಆತನಿಗೆ ಕಪಾಳಮೋಕ್ಷ ಮಾಡಿರುವ ಘಟನೆ ರಾಯಚೂರು ಜಿಲ್ಲೆ ಸಿರವಾರ ತಾಲ್ಲೂಕಿನ ಕುರಕುಂದಾ ಗ್ರಾಮದಲ್ಲಿ ನಡೆದಿದೆ. ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ನಟ ಸುದೀಪ್ ಆಗಮಿಸಿದ್ದಾಗ ಈ ಘಟನೆ ನಡೆದಿದೆ.

 

ಕಾರ್ಯಕ್ರಮಕ್ಕೆ ನಟ ಸುದೀಪ್ ಬಂದಿದ್ದರಿಂದ ಹೆಚ್ಚಿನ ಭದ್ರತೆ ಒದಗಿಸಲಾಗಿತ್ತು. ಈ ವೇಳೆ ಪಿಎಸ್‌ಐ ಗೀತಾಂಜಲಿ ಸೇರಿ ಹಲವರು ಭದ್ರತಾ ಕೆಲಸದಲ್ಲಿ ನಿರತರಾಗಿದ್ದರು. ಈ ಸಂದರ್ಭದಲ್ಲಿ ಯುವಕನೊಬ್ಬ ಅನುಚಿತವಾಗಿ ವರ್ತನೆ ಮಾಡಿದ್ದಾನೆ. ಜೊತೆಗೆ ಪೊಲೀಸರ ಲಾಠಿಗೇ ಕೈ ಹಾಕಿದ್ದಾನೆ. ಅನುಚಿತ ವರ್ತನೆ ಬಳಿಕ ಯುವಕ ಪರಾರಿಯಾಗಲು ಯತ್ನಿಸಿದ್ದಾನೆ. ಯುವಕನ ವರ್ತನೆಯಿಂದ ಬೇಸರಗೊಂಡ ಪಿಎಸ್ಐ ಆತನನ್ನು ಚೇಸ್​ ಮಾಡಿ ಹಿಡಿದಿದ್ದಾರೆ. ಬಳಿಕ ಎಲ್ಲರೆದುರೇ ಪಿಎಸ್​ಐ ಗೀತಾಂಜಲಿ ಯುವಕನಿಗೆ ಬೂಟು​ಗಾಲಿಂದ ಒದ್ದು, ಕಪಾಳ ಮೋಕ್ಷ ಮಾಡಿದ್ದಾರೆ. ಬಳಿಕ ಆ ಯುವಕನ್ನು ಪೊಲೀಸರು ಠಾಣೆಗೆ ಕರೆದೊಯ್ದರು.

 

Share Post