BengaluruCinemaCrime

ನಟ ದರ್ಶನ್‌ ರನ್ನು ಟಾರ್ಗೆಟ್‌ ಮಾಡ್ತಿರೋದು ಯಾರು..?; ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಯಾಗ್ತಿರೋದೇನು..?

ಬೆಂಗಳೂರು; ಕಾಟೇರ ಸಕ್ಸಸ್‌ ಅನ್ನು ಸಹಿಸಿಕೊಳ್ಳಲಾಗದೇ ನಟ ದರ್ಶನ್‌ ಅವರನ್ನು ಟಾರ್ಗೆಟ್‌ ಮಾಡಲಾಗುತ್ತಿದೆ ಎಂದು ನಿನ್ನೆ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಆರೋಪ ಮಾಡಿದ್ದರು. ಇದೀಗ ಈ ವಿಚಾರ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿದೆ. ದರ್ಶನ್‌ ಅಭಿಮಾನಿಗಳು, ಯಾರು ನಮ್ಮ ನಟನನ್ನು ಟಾರ್ಗೆಟ್‌ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಹೀಗಾಗಿ ನಿನ್ನೆಯ ವಿಚಾರ ಭಾರಿ ಕುತೂಹಲಕ್ಕೆ ಕಾರಣವಾಗಿದೆ

ಜನವರಿ 3ರಂದು ಕಾಟೇರ ಚಿತ್ರತಂಡ ರಾಜಾಜಿನಗರದ ಜೆಟ್ಲಾಗ್‌ ಪಬ್‌ನಲ್ಲಿ ಪಾರ್ಟಿ ಮಾಡಿದ್ದರು. ಬೆಳಗಿನಜಾವದವರೆಗೂ ಅಲ್ಲಿಯೇ ಇದ್ದರು. ಅಂದಹಾಗೆ, ಪಬ್‌ ರಾತ್ರಿ 1 ಗಂಟೆವರೆಗೂ ತೆರೆದಿಡಲು ಅನುಮತಿ ಇದೆ. ಆದ್ರೆ ಬೆಳಗಿನಜಾವದವರೆಗೂ ಪಾರ್ಟಿ ಮಾಡಿದ್ದರಿಂದ ನಡರಿಗೆ ಸುಬ್ರಹ್ಮಣ್ಯನಗರ ಪೊಲೀಸರು ನೋಟಿಸ್‌ ಜಾರಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆ ನಟ ದರ್ಶನ್, ಡಾಲಿ ಧನಂಜಯ್, ಚಿಕ್ಕಣ್ಣ, ನೀನಾಸಂ ಸತೀಶ್, ಅಭಿಶೇಕ್ ಅಂಬರೀಶ್, ನಿರ್ದೇಶಕ‌ ತರುಣ್ ಸುದೀರ್, ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ಸಂಗೀತ ನಿರ್ದೇಶಕ ಹರಿಕೃಷ್ಣ ಪೊಲೀಸ್‌ ಠಾಣೆಗೆ ಹಾಜರಾಗಿ ವಿಚಾರಣೆ ಎದುರಿಸಿದ್ದರು.

ಇದೇ ವೇಳೆ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಹಾಗೂ ವಕೀಲ ನಾರಾಯಣಸ್ವಾಮಿಯವರು ನಟ ದರ್ಶನ್‌ ಮೇಲೆ ಯಾರೋ ಟಾರ್ಗೆಟ್‌ ಮಾಡುತ್ತಿದ್ದಾರೆ. ಕಾಟೇರ ಚಿತ್ರ ಸಕ್ಸಸ್‌ ಸಹಿಸಿಕೊಳ್ಳೋದಕ್ಕೆ ಆಗದೇ ಈ ಟಾರ್ಗೆಟ್‌ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ದೊಡ್ಡ ಚರ್ಚೆ ಹುಟ್ಟುಹಾಕಿದೆ.

 

Share Post