CinemaDistrictsHealth

ವಿಷ್ಣುವರ್ದನ್‌ ಆಪ್ತ, ನಿರ್ದೇಶಕ ವಿ.ಆರ್‌.ಭಾಸ್ಕರ್‌ ನಿಧನ

ಬೆಂಗಳೂರು; ಕನ್ನಡ ಚಿತ್ರರಂಗದ ಸಂಭಾಷಣೆಕಾರ ಹಾಗೂ ನಿರ್ದೇಶಕ ವಿ.ಆರ್‌.ಭಾಸ್ಕರ್‌ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮೈಸೂರಿನ ಜೆಎಸ್‌ಎಸ್‌ ಕೊನೆಯುಸಿರೆಳೆದಿದ್ದಾರೆ. ಚಾಮುಂಡಿ ಬೆಟ್ಟದ ತಪ್ಪಲಿನ ಹರಿಶ್ಚಂದ್ರ ಘಾಟ್‌ನಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.

ಭಾಸ್ಕರ್‌ ಅವರು ನಟ ವಿಷ್ಣುವರ್ದನ್‌ ಅವರ ಆಪ್ತರಾಗಿದ್ದರು. ಹಲವಾರು ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದರು. ಜೊತೆಗೆ ಹಲವು ಸಿನಿಮಾಗಳನ್ನು ನಿರ್ದೇಶನ ಕೂಡಾ ಮಾಡಿದ್ದರು. ವಿಷ್ಣುವರ್ದನ್‌ ಜೊತೆ ಅವರು ಹೆಚ್ಚು ಆಪ್ತರಾಗಿದ್ದು, ಅವರ ಜೊತೆ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡಿದ್ದರು.

ಅನುರಾಗ ದೇವತೆ, ಮನೆಮನೆ ರಾಮಾಯಣ, ಸಕಲಕಲಾವಲ್ಲಭ, ಹೃದಯಾಂಜಲಿ, ಪಂಜಾಬಿ ಹೌಸ್ ಸೇರಿ ಹಲವು ಸಿನಿಮಾಗಳನ್ನು ಭಾಸ್ಕರ್‌ ಅವರು ನಿರ್ದೇಶನ ಮಾಡಿದ್ದಾರೆ. ಇನ್ನು ವಿಷ್ಣುವರ್ದನ್‌ ಸೇರಿ ಹಲವರು ನಟರ ಚಿತ್ರಗಳಿಗೆ ಸಂಭಾಷಣೆ ಬರೆದಿದ್ದಾರೆ.

 

Share Post