CinemaNational

ಅಂಗಾಂಗ ದಾನ ಮಾಡಲು ನಿರ್ಧಾರ ಕೈಗೊಂಡ ತೆಲುಗು ನಟ ವಿಜಯ್‌ ದೇವರಕೊಂಡ

ಹೈದರಾಬಾದ್‌; ಮನುಷ್ಯ ಸತ್ತ ಮೇಲೆ ಅಂತ್ಯಕ್ರಿಯೆ ಮಾಡಿದರೆ ಯಾವುದೇ ಉಪಯೋಗಕ್ಕೆ ಬರುವುದಿಲ್ಲ. ಆದ್ರೆ ದೇಹದ ಅಂಗಾಂಗಗಳನ್ನು ದಾನ ಮಾಡಿದರೆ ಒಂದಷ್ಟು ಮಂದಿಗೆ ಜೀವದಾನ ಮಾಡಿದಂತೆ ಆಗುತ್ತದೆ. ಹೀಗಾಗಿಯೇ ನಟ ಡಾ.ರಾಜ್‌ಕುಮಾರ್‌ ಅವರು ಕಣ್ಣು ದಾನ ಮಾಡುವಂತೆ ಕರೆ ನೀಡಿದ್ದರು. ಸ್ವತಃ ಅವರೇ ಕಣ್ಣು ದಾನ ಮಾಡಿದ್ದರು. ಅದೇ ರೀತಿಯ ಹಲವು ಚಿತ್ರ ನಟರು ಇಂತಹ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ತೆಲುಗಿನ ಖ್ಯಾತ ನಟ ವಿಜಯ್‌ ದೇವರಕೊಂಡ ಅವರು ತಮ್ಮ ಅಂಗಾಂಗಗಳನ್ನು ದಾನ ಮಾಡುವ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಸತ್ತ ಮೇಲೆ ಮನುಷ್ಯ ಯಾವುದೇ ಪಯೋಗಕ್ಕೆ ಬರಲ್ಲ. ಹೀಗಾಗಿ ದೇಹ ಮಣ್ಣಾಗುವ ಬದಲು ಉಪಯೋಗವಾಗಲಿ ಎಂದು ವಿಜಯ್‌ ದೇವರಕೊಂಡ ಹೇಳಿದ್ದಾರೆ. ನಾನು ಸತ್ತ ಮೇಲೆ ಅಂಗಾಂಗ ದಾನ ಮಾಡಲು ನಿರ್ಧರಿಸಿದ್ದೇನೆ ಎಂದು ಅವರು ಹೇಳಿದ್ದಾರೆ.  ವೈದ್ಯ ವಿದ್ಯಾರ್ಥಿಗಳನ್ನು ಮಾತನಾಡಿದಾಗ ನನಗೆ ಈ ಆಲೋಚನೆ ಬಂದಿದೆ ಎಂದೂ ಅವರು ಹೇಳಿದ್ದಾರೆ.

 

Share Post