Cinema

ಖ್ಯಾತ ತೆಲುಗು ಚಿತ್ರ ನಿರ್ಮಾಪಕ ಬೆಲ್ಲಂಕೊಂಡ ಸುರೇಶ್‌ ವಿರುದ್ಧ ವಂಚನೆ ಕೇಸ್‌

ಹೈದರಾಬಾದ್‌: ಖ್ಯಾತ ತೆಲುಗು ಚಿತ್ರ ನಿರ್ಮಾಪಕ ಬೆಲ್ಲಂಕೊಂಡ ಸುರೇಶ್‌ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. 2018ರಲ್ಲಿ ಸುರೇಶ್‌ ಅವರು 85 ಲಕ್ಷ ರೂಪಾಯಿ ಸಾಲ ಪಡೆದು ಇದುವರೆಗೂ ಮರಳಿಸಿಲ್ಲ ಎಂದು ಶ್ರವಣ್‌ ಕುಮಾರ್‌ ದೂರು ದಾಖಲು ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಪೋಲಿಸರಿಗೆ ನೀಡಿದ್ದಾರೆ.

ನಿರ್ಮಾಪಕ ಸುರೇಶ್‌ ಅವರು ಟಾಲಿವುಡ್‌ನಲ್ಲಿ ಎರಡು ದಶಕಗಳಿಂದ ಸಕ್ರಿಯರಾಗಿದ್ದು, ಹಲವು ಹಿಟ್‌ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಇದೀಗ ಅವರು ವಂಚನೆ ಆರೋಪ ಎದುರಿಸುತ್ತಿದ್ದಾರೆ. ಈ ಘಟನೆ ಸಂಬಂಧ ಪೊಲೀಸರು ದೂರು ದಾಖಲು ಮಾಡಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ ಎಂದು ತೆಲಗು ಮಾಧ್ಯಮಗಳು ವರದಿ ಮಾಡಿವೆ.  ಸದ್ಯ ನಿರ್ಮಾಪಕ ಸುರೇಶ್‌ ಅವರು ತೆಲುಗಿನ ಹಿಟ್‌ ಚಿತ್ರ ಛತ್ರಪತಿಯನ್ನು ಹಿಂದಿಗೆ ರಿಮೇಕ್‌ ಮಾಡುತ್ತಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೆಲ್ಲಂಕೊಂಡ ಸುರೇಶ್‌, ಶ್ರವಣ್‌ ಉದ್ದೇಶ ನನ್ನ ಮಾನ ತೆಗೆಯುವುದೇ ಆಗಿದೆ. ಆತನ ಹಿಂದೆ ಯಾರಿದ್ದಾರೆ ಎಂಬುದು ನನಗೆ ಗೊತ್ತಿದೆ. ಆತನ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ. ಕ್ರಿಮಿನಲ್‌ ಕೇಸ್‌ ದಾಖಲಿಸುತ್ತೇನೆ ಎಂದು ಹೇಳಿದ್ದಾರೆ.

Share Post