BengaluruCinemaDistrictsPolitics

ನಾಳೆ ವರುಣಾದಲ್ಲಿ ಶಿವರಾಜ್‌ಕುಮಾರ್‌, ರಮ್ಯಾ, ದುನಿಯಾ ವಿಜಿ ಪ್ರಚಾರ

ಮೈಸೂರು; ನಾಳೆ ವರುಣಾ ಚುನಾವಣಾ ಅಖಾಡ ರಂಗೇರಲಿದೆ. ಸ್ಟಾರ್‌ ಸಿನಿಮಾ ನಟರೆಲ್ಲಾ ನಾಳೆ ವರುಣಾಕ್ಕೆ ಆಗಮಿಸುತ್ತಿದ್ದಾರೆ. ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌, ಖ್ಯಾತ ನಟಿ ಹಾಗೂ ಮಾಜಿ ಸಂಸರೆ ರಮ್ಯಾ ಹಾಗೂ ದುನಿಯಾ ವಿಜಿ ನಾಳೆ ವರುಣಾದಲ್ಲಿ ಪ್ರಚಾರ ನಡೆಸಲಿದ್ದಾರೆ.

ಮೂವರೂ ಸ್ಟಾರ್‌ಗಳು ನಾಳೆ ಮಾಜಿ ಸಿಎಂ ಸಿದ್ದರಾಮಯ್ಯ ಪರ ಪ್ರಚಾರ ನಡೆಸಲಿದ್ದಾರೆ. ರಮ್ಯಾ ಕಾಂಗ್ರೆಸ್‌ ಸ್ಟಾರ್‌ ಪ್ರಚಾರಕಿಯಾಗಿದ್ದು, ನಾಳೆ ಅವರು ಸಿದ್ದರಾಮಯ್ಯ ಪರ ಪ್ರಚಾರ ಮಾಡಲಿದ್ದಾರೆ. ಇನ್ನು ಸಿದ್ದರಾಮಯ್ಯ ಅವರ ಮೇಲಿನ ಅಭಿಮಾನದಿಂದಾಗಿ ಶಿವರಾಜ್‌ಕುಮಾರ್‌ ಹಾಗೂ ದುನಿಯಾ ವಿಜಯ್‌ ಕೂಡಾ ನಾಳೆ ಪ್ರಚಾರ ನಡೆಸಲಿದ್ದಾರೆ. ಸ್ವಯಂ ಪ್ರೇರಣೆಯಿಂದ ಇಬ್ಬರೂ ನಾಯಕ ನಟರು ನಾಳೆ ಸಿದ್ದರಾಮಯ್ಯ ಪರ ಮತಯಾಚನೆ ಮಾಡಲಿದ್ದಾರೆ.

ರೋಡ್‌ ಶೋ ನಡೆಸಲಿರುವ ಮೂವರೂ ಸಿದ್ದರಾಮಯ್ಯ ಅವರನ್ನು ಅತ್ಯಂತ ದೊಡ್ಡ ಮಟ್ಟದಲ್ಲಿ ಗೆಲ್ಲಿಸುವಂತೆ ಮನವಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ನೆಚ್ಚಿನ ನಟ, ನಟಿಯರು ಬರುತ್ತಿರುವುದರಿಂದ ವರುಣಾ ಜನ ಅವರಿಗಾಗಿ ಕಾಯುತ್ತಿದ್ದಾರೆ. ನಾಳೆ ವರುಣಾ ಚುನಾವಣಾ ಕಣ ರಂಗೇರಲಿದೆ.

Share Post