Cinema

ಫಿಲ್ಮ್‌ ಚೇಂಬರ್‌ ಅಂಗಳಕ್ಕೆ RRR ವಿವಾದ; ವಾಣಿಜ್ಯ ಮಂಡಳಿಗೆ ಶಿವಣ್ಣ ಭೇಟಿ

ಬೆಂಗಳೂರು; ಆರ್‌ಆರ್‌ಆರ್‌ ಸಿನಿಮಾ ವಿವಾದ ಈಗ ಫಿಲ್ಮ್‌ ಚೇಂಬರ್‌ ಮೆಟ್ಟಿಲು ಏರಿದೆ. ಪುನೀತ್‌ ರಾಜ್‌ಕುಮಾರ್‌ ಅಭಿನಯದ ಜೇಮ್ಸ್‌ ಸಿನಿಮಾವನ್ನು ತೆಗೆದು ಕೆಲ ಚಿತ್ರಮಂದಿರಗಳಲ್ಲಿ ಆರ್‌ಆರ್‌ಆರ್‌ ಸಿನಿಮಾ ಪ್ರದರ್ಶನಕ್ಕೆ ಸಿದ್ಧತೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಶಿವರಾಜ್‌ಕುಮಾರ್‌ ದಂಪತಿ ಜೇಮ್ಸ್‌ ಚಿತ್ರದ ನಿರ್ಮಾಪಕ ಜೊತೆ ಸಿಎಂ ನಿವಾಸಕ್ಕೆ ಭೇಟಿ ನೀಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ಮಾತುಕತೆ ನಡೆಸಿದ್ದರು. ಇದೀಗ ಶಿವರಾಜ್‌ ಕುಮಾರ್‌ ಅವರು, ಚಲನಚಿತ್ರ ವಾಣಿಜ್ಯ ಮಂಡಳಿಗೆ ಭೇಟಿ ನೀಡಿದ್ದಾರೆ.

 

ವಿವಾದದ ಕುರಿತಂತೆ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಬೆಳಗ್ಗೆ ಸಲಹೆ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಫಿಲ್ಮ್‌ ಚೇಂಬರ್‌ ನಲ್ಲಿ ಚರ್ಚೆ ನಡೆಸಲು ಬಂದಿದ್ದೇವೆ ಎಂದು ಜೇಮ್ಸ್‌ ಚಿತ್ರದ ನಿರ್ದೇಶಕ ಕಿಶೋರ್‌ ಹೇಳಿದ್ದಾರೆ. ಇನ್ನು ನಾಳೆ ಆರ್‌ಆರ್‌ಆರ್‌ ಸಿನಿಮಾ ಬಿಡುಗಡೆ ಸಿದ್ಧತೆಗಳು ನಡೆದಿವೆ. ಈ ಬೆನ್ನಲ್ಲೇ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.

 

 

Share Post