Cinema

ಪವನ ಪುತ್ರ ಭಾಯಿಜಾನ್‌ – ಸಲ್ಲು ನೆಕ್ಸ್ಟ್‌ ಸಿನಿಮಾ ಟೈಟಲ್

ಸಲ್ಮಾನ್‌ ಖಾನ್‌ ಮೊನ್ನೆ ತಾನೆ ಹಾವಿನಿಂದ ಕಚ್ಚಿಸಿಕೊಂಡು ಚೇತರಿಸಿಕೊಂಡಿದ್ದರು. ಇಂದು ಅವರ ೫೬ನೇ ಹುಟ್ಟು ಹಬ್ಬದ ಪ್ರಯುಕ್ತ ಮಾಧ್ಯಮಗಳೊಂದಿಗೆ ಮಾತನಾಡಿದ ಸಲ್ಮಾನ್‌ ಖಾನ್‌ ತಮ್ಮ ಮುಂದಿನ ಚಿತ್ರದ ಶೀರ್ಷಿಕೆ ರಿವೀಲ್‌ ಮಾಡಿದ್ದಾರೆ.

ಭಜರಂಗಿ ಭಾಯಿಜಾನ್‌ ಸಕ್ಸಸ್‌ನ ನಂತರ ಅದರ ಸೀಕ್ವೆಲ್‌ ಮಾಡುವುದಾಗಿ ಕೆಲವು ದಿನಗಳ ಹಿಂದಷ್ಟೇ ಸಲ್ಮಾನ್‌ ಖಾನ್‌ ಹೇಳಿಕೊಂಡಿದ್ದರು. ರಾಜ್‌ಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ ಭಜರಂಗಿ ಭಾಯಿಜಾನ್‌ ಸಿನಿಮಾಗೆ ಕಥೆ ಬರೆದಿದ್ದರು. ರಾಜಮೌಳಿ ಸಿನಿಮಾ ನಿರ್ದೇಶನ ಮಾಡಬೇಕಿತ್ತು ಆದರೆ ಕೆಲವು ಕಾರಣಗಳಿಂದ ಕಬೀರ್‌ ಖಾನ್‌ ನಿರ್ದೇಶನ ಮಾಡಿದ್ದರು. ಸಿನಿಮಾ ಸೂಪರ್‌ ಡೂಪರ್‌ ಹಿಟ್‌ ಆಗಿತ್ತು.

ಈಗ ಅದರ ಸೀಕ್ವೆಲ್‌ ಬರ್ತಿದೆ. ವಿಜಯೇಂದ್ರ ಪ್ರಸಾದ್‌ ಅವರೇ ಕಥೆ ಬರೆದು ಟೈಟಲ್‌ ಕೂಡ ಇಟ್ಟಿದಾರೆಂದು ಸಲ್ಮಾನ್‌ ಖಾನ್‌ ಹೇಳಿಕೊಂಡಿದ್ದಾರೆ. ಆದರೆ ನಿರ್ದೇಶಕ ಯಾರೆಂಬುದು ಮಾತ್ರ ಇನ್ನೂ ನಿಗೂಢವಾಗಿದೆ.

Share Post