CinemaCrime

ನಟ ದರ್ಶನ್‌ ಜೈಲು ಸೇರಿದ್ದಕ್ಕೆ ಬೇಸರ; ಮನನೊಂದು ಅಭಿಮಾನಿ ಆತ್ಮಹತ್ಯೆ!

ರಾಮನಗರ; ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಜೈಲು ಸೇರಿದ್ದರಿಂದ ಮನನೊಂದ ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.. ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಮಾಳೆ ದೊಡ್ಡಿಯಲ್ಲಿ ಈ ಘಟನೆ ನಡೆದಿದ್ದು, ಮೃತನ ದೇಹ ಮೋರಿಯೊಂದರಲ್ಲಿ ಪತ್ತೆಯಾಗಿದೆ..

ಭೈರೇಶ್‌ ಎಂಬಾತನೇ ಸಾವನ್ನಪ್ಪಿದ ದರ್ಶನ್‌ ಅಭಿಮಾನಿ.. ದರ್ಶನ್‌ ಬಂಧನವಾಗಿದ್ದರಿಂದ ಮೂರು ನಾಲ್ಕು ದಿನಗಳಿಂ ಭೈರೇಶ್‌ ಊಟ ನೀರು ಬಿಟ್ಟಿದ್ದನಂತೆ.. ಇದರಿಂದಾಗಿ ನಿತ್ರಾಣಗೊಂಡು ಮೋರಿಗೆ ಬಿದ್ದು ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದೆ..

ಟಿವಿಗಳಲ್ಲಿ, ಸೋಷಿಯಲ್‌ ಮೀಡಿಯಾಗಳಲ್ಲಿ ದರ್ಶನ್‌ ಪ್ರಕರಣವೇ ಚರ್ಚೆಯಾಗುತ್ತಿದೆ.. ನಮ್ಮ ಹೀರೋಗೆ ಇಂತಹ ಪರಿಸ್ಥಿತಿ ಬರಬಾರದಿತ್ತು ಎಂದು ಭೈರೇಶ್‌ ಕೊರಗುತ್ತಿದ್ದರಂತೆ.. ಜೊತೆಗೆ ಬೇಸರದಲ್ಲಿ ಕಳೆ ಮೂರು ನಾಲ್ಕು ದಿನಗಳಿಂದ ಊಟ, ನೀರು ಕೂಡಾ ಬಿಟ್ಟಿದ್ದರಿಂದ ಸಾಕಷ್ಟು ನಿತ್ರಾಣನಾಗಿದ್ದ ಎಂದು ಹೇಳಲಾಗಿದೆ..

 

Share Post