Cinema

ಅಭಿಮಾನಿಗಳ ಗುಂಪಿನಲ್ಲಿ ಸಿಕ್ಕಿ ನಟ ರಾಮ್‌ಚರಣ್‌ ಒದ್ದಾಟ

ರಾಜಮಂಡ್ರಿ: ಶಂಕರ್‌ ನಿರ್ದೇಶನದ RC-15 ತೆಲುಗು ಚಿತ್ರದ ಚಿತ್ರೀಕರಣಕ್ಕೆಂದು ರಾಜಮಂಡ್ರಿಗೆ ಬಂದಿದ್ದ ಖ್ಯಾತ ತೆಲುಗು ನಟ ರಾಮ್‌ ಚರಣ್‌ ತೇಜ್‌ ಅವರು ಅಭಿಮಾನಿಗಳ ಸಿಲುಕಿ ಕೆಲಕಾಲ ಒದ್ದಾಡಿದ ಘಟನೆ ನಡೆದಿದೆ. ರಾಜಮಂಡ್ರಿ ವಿಮಾನ ನಿಲ್ದಾಣದ ಹೊರಗೆ ಈ ಘಟನೆ ನಡೆದಿದೆ.

ಸಿನಿಮಾ ಚಿತ್ರೀಕರಣಕ್ಕೆಂದು ರಾಮ್‌ ಚರಣ್‌ ರಾಮಮಂಡ್ರಿಗೆ ಬರುತ್ತಿದ್ದಾರೆಂದು ತಿಳಿದು ವಿಮಾನ ನಿಲ್ದಾಣದ ಬಳಿ ನೂರಾರು ಅಭಿಮಾನಿಗಳು ಸೇರಿದ್ದರು. ರಾಮ್‌ ಚರಣ್‌ ವಿಮಾನದಿಂದಿಳಿದು ಹೊರಬರುತ್ತಿದ್ದಂತೆ ಅಭಿಮಾನಿಗಳು ಅವರಿಗೆ ಮುತ್ತಿಕೊಂಡರು. ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳ ನೂಕಾಟ ತಳ್ಳಾಟ ನಡೆಸಿದರು. ಇದ್ರಿಂದ ರಾಮ್‌ಚರಣ್‌ ಕೆಲಕಾಲ ಕಸಿವಿಸಿ ಅನುಭವಿಸಬೇಕಾಯಿತು. ಕಾರು ಹತ್ತುವುದಕ್ಕೂ ಬಿಡದೇ ಅಭಿಮಾನಿಗಳ ನೂಕಾಡುತ್ತಿದ್ದರು.

ಕೊನೆಗೆ ಭದ್ರತಾ ಸಿಬ್ಬಂದಿ ಅಭಿಮಾನಿಗಳನ್ನು ಪಕ್ಕಕ್ಕೆ ತಳ್ಳಿ ರಾಮ್‌ಚರಣ್‌ರನ್ನು ಕಾರಿನಲ್ಲಿ ಕೂರಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಸಾವರಿಸಿಕೊಂಡ ರಾಮ್‌ ಚರಣ್‌ ಹೋಟೆಲ್‌ನತ್ತ ನಡೆದರು.

 

Share Post