Bengaluru

ಸೇಫ್ಟಿಗಾಗಿ ಹೆಲ್ಮೆಟ್‌ ಧರಿಸುವ ನಿಯಮವಿದ್ದಂತೆ, ರಕ್ಷಣೆಗಾಗಿ ಹಿಜಾಬ್‌ ಇದೆ -ಜಮೀರ್‌ ಅಹ್ಮದ್

ಬೆಂಗಳೂರು: ಹಿಜಾಬ್‌ ವಿವಾದದಲ್ಲಿ ಜಮೀರ್‌ ಅಹ್ಮದ್‌ ಖಾನ್‌ ಮತತೊಂದು ಹೇಳಿಕೆಯನ್ನು ನೀಡಿದ್ದಾರೆ. ಹಿಜಾಬ್‌ ಧರಿಸಿದ್ರೆ ಅತ್ಯಾಚಾರಗಳಾಗುತ್ತವೆ ಎಂಬ ಮಾತನ್ನು ಹೇಳಿ ನಾನು ಆ ರೀತಿ ಹೇಳಿಕೆ ನೀಡಿಲ್ಲ ಎಂದು ಕಾಂಗ್ರೆಸ್‌ ಶಾಸಕ ಜಮೀರ್‌ ಯೂಟರ್ನ್‌ ಹೊಡೆದಿದ್ರು.

ಈಗ ಮತ್ತೆ ಹಿಜಾಬ್‌ ಬಗ್ಗೆ ಹೇಳಿಕೆಯನ್ನು ನೀಡಿದ್ದು, ರಕ್ಷಣೆಯ ವಿಚಾರವಾಗಿ ಮಾತನಾಡಿದ್ದಾರೆ. ಜನರ ರಕ್ಷಣೆಗಾಗಿ ಸರ್ಕಾರ ಹೆಲ್ಮೆಟ್‌ ಧರಿಸುವಂತೆ ನಿಯಮ ಮಾಡಿದೆ. ಅದೇ ರೀತಿ ಸೇಫ್ಟಿ ಇರಲಿ ಎಂದು ಹೆಣ್ಣುಮಕ್ಕಳಿಗೆ ಹಿಜಾಬ್‌ ಧರಿಸುವಂತೆ ನಮ್ಮ ಧರ್ಮದವರು ನಿಯಮ ಮಾಡಿದ್ದಾರೆ. ಅದನ್ನು ಅವರು ಫಾಲೂ ಮಾಡ್ತಿದ್ದಾರೆ ಅಷ್ಟೇ..

ರಕ್ಷಣೆ ಮತ್ತು ತಮ್ಮ ಅಂದವನ್ನು ಕಾಪಾಡಿಕೊಳ್ಳಲು ಹಿಜಾಬ್‌ ಧರಿಸುತ್ತಾರೆ. ನೂರಾರು ವರ್ಷಗಳಿಂದ ಹಿಜಾಬ್‌ ಧರಿಸುತ್ತಾ ಬಂದಿದ್ದಾರೆ. ರಾಜ್ಯದಲ್ಲಿ ಮಕ್ಕಳಿಗೆ ಕೇಸರಿ ಶಾಲು ಹಾಕಿಸುತ್ತಿದ್ದಾರೆ. ರಾಜಕೀಯ ಲಾಭಕ್ಕಾಗಿ ಹೀಗೆಲ್ಲಾ ಮಾಡಿಸುತ್ತಿದ್ದಾರೆ.  ಈ ವಿಚಾರದಲ್ಲಿ ರಾಜ್ಯದ ಜನರೇ ಬಿಜೆಪಿಯವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಜಮೀರ್‌ ಅಹ್ಮದ್‌ ಕಿಡಿ ಕಾರಿದ್ದಾರೆ.

Share Post