CinemaNational

ಜೈಲಿಂದ ಹೊರಬಂದ ನಿರ್ಮಾಪಕ ರವೀಂದರ್‌; ಮುದ್ದಾಡಿದ ಮಹಾಲಕ್ಷ್ಮೀ

ಮುಂಬೈ; ಚಿತ್ರ ನಿರ್ಮಾಪಕ ರವೀಂದರ್‌ ಚಂದ್ರಶೇಖರ್‌ ವಂಚನೆ ಪ್ರಕರಣದಲ್ಲಿ ಜೈಲು ಸೇರಿದ್ದರು. ಕೊನೆಗೂ ಅವರಿಗೆ ಬೇಲ್‌ ಸಿಕ್ಕಿದ್ದು ಜೈಲಿಂದ ಹೊರಬಂದಿದ್ದಾರೆ. ಮದ್ರಾಸ್‌ ಹೈಕೋರ್ಟ್‌ 5 ಕೋಟಿ ರೂ. ಶ್ಯೂರಿಟಿಯೊಂದಿಗೆ ರವೀಂದರ್‌ಗೆ ಷರತ್ತುಬದ್ಧ ಜಾಮೀನು ನೀಡಿದೆ. ಅಂದಹಾಗೆ ಪತಿ ಜೈಲಿನಲ್ಲಿದ್ದಾಗ ನನಗೆ ಮೋಸ ಮಾಡಿದ್ದಾನೆ  ಎಂದು ಗೋಳು ತೋಡಿಕೊಳ್ಳುತ್ತಿದ್ದ ರವೀಂದರ್‌ ಪತ್ನಿ ಮಹಾಲಕ್ಷ್ಮೀ ಈಗ ತನ್ನ ವರಸೆ ಬದಲಿಸಿದ್ದಾಳೆ. ಪತಿ ಬಿಡುಗಡೆಯಾಗುತ್ತಿದ್ದಂತೆ ಹೋಗಿ ಮುದ್ದಾಡಿದ್ದಾಳೆ.

ನನ್ನ ಗಂಡ ಸಾಲ ಮಾಡಿರುವ ಬಗ್ಗೆ ಹಾಗೂ ಮೋಸ ಮಾಡಿರುವ ಬಗ್ಗೆ ನನಗೆ ಗೊತ್ತಿರಲಿಲ್ಲ. ನನಗೆ ಮೋಸ ಮಾಡಿ ಮದುವೆಯಾಗಿದ್ದಾರೆ ಎಂದೆಲ್ಲಾ ಮಹಾಲಕ್ಷ್ಮೀ ಹೇಳಿಕೊಂಡಿದ್ದರು. ಆದ್ರೆ ಗಂಡ ಜೈಲಿಂದ ಹೊರಬರುತ್ತಿದ್ದಂತೆ ಹೋಗಿ ಗಂಡನನ್ನು ಅಪ್ಪಿಕೊಂಡಿದ್ದಾಳೆ. ಮುದ್ದಾಡಿದ್ದಾಳೆ.

 

Share Post