CinemaCrime

ನಟ ದರ್ಶನ್ ಜೊತೆ ಬಂಧಿತರಾದ ಹತ್ತು ಮಂದಿ ಯಾರು?

ಬೆಂಗಳೂರು; ನಟ ದರ್ಶನ್ ಜೊತೆಗೆ ಹತ್ತು ಮಂದಿಯನ್ನು ಬಂಧಿಸಲಾಗಿದೆ.. ಅವ್ರೆಲ್ಲ ಯಾರು ನೋಡೋಣ ಬನ್ನಿ..

ವಿನಯ್.ವಿ, ನಾಗರಾಜು ಆರ್​, ಲಕ್ಷ್ಮಣ್​ ಎಂ, ಪ್ರದೋಶ್​ ಎಸ್,  ಪವನ್ ಕೆ, ದೀಪಕ್ ಕುಮಾರ್​ ಎಂ, ನಂದೀಶ್​, ಕಾರ್ತಿಕ್​, ನಿಖಿಲ್ ನಾಯಕ್​, ಕೆಂಬತ್ತಳ್ಳಿ ಗೊಟ್ಟಿಗೇರಿ ರಾಘವೇಂದ್ರ, ಕೇಶವ ಮೂರ್ತಿ ಬಂಧಿತ ಆರೋಪಿಗಳಗಿದ್ದಾರೆ..

ರೇಣುಕಾಚಾರ್ಯ ಅವರ ಕೊಲೆ ಪ್ರಕರಣದಲ್ಲಿ ದರ್ಶನ್ ಮನೆಯಲ್ಲಿ ಇರುವ ದರ್ಶನ್ ಆಪ್ತ ಪವನ್ ಅವರನ್ನು ಬಂಧಿಸಲಾಗಿದೆ. ಪವನ್ ಅವರು ರೇಣುಕಾಚಾರ್ಯ ಅವರನ್ನು ಕಿಡ್ನ್ಯಾಪ್ ಮಾಡಲು ಹೇಳಿದ್ದರು. ಪವನ್ ಅವರು ದರ್ಶನ್ ಗೆಳತಿ ಪವಿತ್ರ ಗೌಡ ಅವರಿಗೂ ಆಪ್ತ ಎನ್ನಲಾಗಿದೆ.

ಪ್ರದೋಶ್​ ಎಸ್ ಅವರು ಹೋಟೆಲ್ ಉದ್ಯಮಿಯಾಗಿದ್ದಾರೆ. ನಂದೀಶ್ ಅವರು ರೇಣುಕಾಚಾರ್ಯ ಅವರನ್ನು ಕಿಡ್ನ್ಯಾಪ್ ಮಾಡಿಕೊಂಡು ಕರೆತಂದವನು. ಹಲ್ಲೆ ಮಾಡಿದ ಮುಖ್ಯ ವ್ಯಕ್ತಿ ಎನ್ನಲಾಗಿದೆ.

ಕೇಶವಮೂರ್ತಿ ಎಂಬುವವರು ಪ್ರದೂಶ್ ಗೆಳೆಯ ಹಾಗೂ ಉದ್ಯಮಿ ಯಾಗಿದ್ದಾರೆ. ರಾಘವೇಂದ್ರ ಎಂಬುವವರು ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷರಾಗಿದ್ದಾರೆ.

Share Post