Cinema

ತೆಲುಗು ಚಲನಚಿತ್ರ ನಟರ ಒಕ್ಕೂಟದಿಂದ ಪ್ರಕಾಶ್‌ ರಾಜ್‌ಗೆ ಗೇಟ್‌ಪಾಸ್

ಹೈದರಾಬಾದ್:‌ ತೆಲುಗು ಚಲನಚಿತ್ರ ನಟರ ಒಕ್ಕೂಟದಿಂದ ನಟ ಪ್ರಕಾಶ್‌ ರಾಜ್‌ ಹೊಬಂದಿದ್ದಾರೆ. ಮೊನ್ನೆ ನಡೆದ ಒಕ್ಕೂಟ ಎಲೆಕ್ಷನ್‌ನಲ್ಲಿ ಪ್ರಕಾಶ್‌ ರಾಜ್‌ ಸೇರಿದಂತೆ ಹಲವು ಬೆಂಬಲಿಗರು ಹೀನಾಯವಾಗಿ ಸೋಲನ್ನನುಭವಿಸಿದ್ರು. ಈ ಬಗ್ಗೆ ಮಂಚು ವಿಷ್ಣು ಹಾಗೂ ಪ್ರಕಾಶ್‌ ರಾಜ್‌ ಬೆಂಬಲಿಗರ ನಡುವೆ ಹುಸಿಮುನಿಸು ಹೊಗೆಯಾಡುತ್ತಿತ್ತು. ಎರಡೂ ಪಕ್ಷದ ಬೆಂಬಲಿಗರು ಪ್ರತಿಬಾರಿ ಪ್ರೆಸ್‌ ಮೀಟ್‌ ಕರೆದು ಒಬ್ಬರ ಮೇಲೊಬ್ಬರು ಕೆಸರೆರಚಾಟ ಮುಂದುವರೆದಿತ್ತು ಕೊನೆಗೆ ಒಕ್ಕೂಟದ ಚುನಾವಣೆಯಲ್ಲಿ ಮಂಚು ಮನೋಜ್‌ ಜಯಶೀಲರಾದ್ರು, ಇದರಲ್ಲೂ ಕೂಡ ಮೋಸ ಇದೆ ಅಂತ ಪ್ರಕಾಶ್‌ ರಾಜ್‌ ಕಿಡಿ ಕಾರಿದ್ರು. ಅಲ್ಲದೆ ನಾನು ಇಲ್ಲಿ ಕೆಲಸ ಮಾಡುವುದಿಲ್ಲ ರಾಜೀನಾಮೆ ನೀಡುವುದಾಗಿ ಹೇಳಿದ್ರು. ಇದಕ್ಕೆ ಪುಷ್ಠಿ ನೀಡುವಂತೆ ಒಕ್ಕೂಟ ಚುನಾವಣೆಯಲ್ಲಿ ಗೆದ್ದ ಪ್ರಕಾಶ್‌ ರಾಜ್‌ ಬೆಂಬಲಿಗರು ಕೂಡ ರಾಜೀನಾಮೆ ನೀಡಿದ್ರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಂಚು ವಿಷ್ಣು ನಾನು ಒಂದು ತಿಂಗಳಿಂದ ರಾಜೀನಾಮೆ ಹಿಂಪಡೆಯುವಂತೆ ಒತ್ತಾಯಿಸಿದ್ದೇನೆ. ಎಲ್ಲರೂ ಒಟ್ಟಿಗೆ ಕೆಲಸ ಮಾಡೋಣ ಅಂತ ಎಷ್ಟೇ ಮನವೊಲಿಸಿದ್ರೂ ಅವರು ಒಪ್ಪಿಕೊಳ್ಳಲಿಲ್ಲ ಹಾಗಾಗಿ ರಾಜೀನಾಮೆ ಅಂಗೀಕರಿಸದೆ ಬೇರೆ ದಾರಿ ಇಲ್ಲ ಎಂದಿದ್ದಾರೆ.

Share Post