Cinema

ಕರ್ನಾಟಕ ನನಗೆ ಶೂನ್ಯ ಅನಿಸುತ್ತಿದೆ: ನಟ Jr. NTR

ಬೆಂಗಳೂರು: ಪುನೀತ್‌ ಸರ್‌ ಇಲ್ಲದ ಕರ್ನಾಟಕ ನನಗೆ ಶೂನ್ಯ ಅನಿಸುತ್ತಿದೆ ಎಂದು ತೆಲುಗು ನಟ ನಂದಮೂರಿ ತಾರಕ್‌ ರಾಮಾರಾವ್‌ ಕೆಲಕಾಲ ಭಾವುಕರಾದ್ರು. ಬಹುನಿರೀಕ್ಷಿತ RRR ಸಿನಿಮಾ ಸುದ್ದಿಗೋಷ್ಠಿ ನಡೆಸುವ ವೇಳೆ ಎಸ್.ಎಸ್.ರಾಜಮೌಳಿ, ನಟ ರಾಮಚರಣ್, ಆಲಿಯಾ ಭಟ್‌, ಅಜಯ್‌ ದೇವಗನ್‌ ಎಲ್ಲರೆದರು ಪುನೀತ್‌ ಸರ್‌ ಅವರನ್ನು ನೆನೆದು ಚಕ್ರವ್ಯೂಹ ಸಿನಿಮಾದ ಗೆಳೆಯಾ..ಗೆಳೆಯಾ..ಗೆಲುವೇ ನಮದಯ್ಯಾ ಹಾಡನ್ನು ಹಾಡಿ ದಿವಂಗತ ಅಪ್ಪು ಸರ್‌ಗೆ ನಮನವನ್ನು ಸಲ್ಲಿಸಿದ್ರು. ಈ ಹಾಡನ್ನು ನಾನು ಹಾಡೋದು ಇದೇ ಮೊದಲು ಇದೇ ಕೊನೆ ಅಂತ ಕಂಬನಿ ಮಿಡಿದ್ರು.

Share Post