Cinema

ಭಾರ್ಗವಿ ನಾರಾಯಣ್‌ ಅವರ ದೇಹ ದಾನ ಮಾಡಿದ ಕುಟುಂಬಸ್ಥರು

ಬೆಂಗಳೂರು : ನಿನ್ನೆ ಸಂಜೆ ನಿಧನರಾದ ಭಾರ್ಗವಿ ನಾರಾಯಣ್‌ ಅವರ ದೇಹವನ್ನು ಕುಟುಂಬಸ್ಥರು ಸೆಂಟ್‌ ಜಾನ್‌ ಆಸ್ಪತ್ರೆಗೆ ದಾನ ಮಾಡಿದ್ದಾರೆ. ಇಂದು ಬೆಳಗ್ಗೆ 11ರ ವರೆಗೆ ಭಾರ್ಗವಿ ನಾರಾಯಣ್‌ ಅವರ ಮನೆಯಲ್ಲಿಯೇ ಅಂತಿಮ ದರ್ಶನಕ್ಕೆ ಏರ್ಪಾಡು ಮಾಡಲಾಗಿತ್ತು. ನಂತರ ದೇಹವನ್ನು ಸೇಂಟ್‌ ಜಾನ್‌ ಆಸ್ಪತ್ರೆಗೆ ರವಾನಿಸಲಾಗಿದೆ.

ದೇಹದಾನ ಮತ್ತು ಕಣ್ಣು ದಾನ ಮಾಡಬೇಕು ಎಂಬುದು ಭಾರ್ಗವಿ ನಾರಾಯಣ್‌ ಅವರ ಆಸೆಯಾಗಿತ್ತಂತೆ. ಅದರಂತೆಯೇ ಕುಟುಂಬದವರು ಅವರ ಆಸೆಯನ್ನು ನೆರವೇರಿಸಿದ್ದಾರೆ. ಭಾರ್ಗವಿ ನಾರಾಯಣ್‌ ಅವರ ಮಗ ಪ್ರಕಾಶ್‌ ಬೆಳವಾಡಿ ತಾಯಿಯ ಆಸೆಯನ್ನು ಈಡೇರಿಸಿದ್ದಾರೆ. ಇದು ಅವರ ಕೊನೆ ಆಸೆ ಆಗಿತ್ತು ಎಂಬ ವಿಷಯವನ್ನು ಸಹ ಪ್ರಕಾಶ್‌ ಅವರೇ ತಿಳಿಸಿದ್ದಾರೆ.

ರಂಗಭೂಮಿ, ಕಿರುತೆರೆ, ಸಿನಿರಂಗದಲ್ಲಿಯೂ ಗುರುತಿಸಿಕೊಂಡಿದ್ದ ಭಾರ್ಗವಿ ನಾರಾಯಣ್‌ ಅವರ ಅಗಲಿಕೆಗೆ ಸಾಕಷ್ಟು ಸಿನಿ ಗಣ್ಯರು ಕಂಬನಿ ಮಿಡಿದಿದ್ದಾರೆ.

Share Post