Cinema

ತೆಲಂಗಾಣದಲ್ಲಿ ಕುರುಡು ಸಿನಿಮಾ ಪ್ರೇಮಕ್ಕೆ ಬಾಲಕ ಬಲಿ

ಹೈದರಾಬಾದ್‌: ತೆಲುಗಿನ ಪವರ್‌ ಸ್ಟಾರ್‌ ಪವನ್‌ ಕಲ್ಯಾಣ್‌ ನಟಿಸಿರುವ ಬೀಮ್ಲಾ ನಾಯಕ ಸಿನಿಮಾದ ಟಿಕೆಟ್‌ ಖರೀದಿಗೆ ಹಣ ಕೊಡದಿದ್ದ ಮನನೊಂದು ಹದಿಮೂರು ವರ್ಷದ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಗ್ತಿಯಾಲ್‌ ಎಂಬ ಗ್ರಾಮದಲ್ಲಿ ನಡೆದಿದೆ.

    ಜಗ್ತಿಯಾಲ್‌ ನಿವಾಸಿ ಹದಿಮೂರು ವರ್ಷದ ಬಾಲಕ ನವದೀಪ್‌ ಆತ್ಮಹತ್ಯೆ ಮಾಡಿಕೊಂಡ ಬಾಲಕ. ಬೀಮ್ಲಾ ನಾಯಕ್‌ ಸಿನಿಮಾದ ಟಿಕೆಟ್‌ ಖರೀದಿಸಲು 300 ರೂಪಾಯಿ ಬೇಕೆಂದು ನವದೀಪ್‌ ತನ್ನ ತಂದೆಯ ಬಳಿ ಕೇಳಿದ್ದ. ಆದ್ರೆ ತಂದೆ ಹಣ ಕೊಡದಿದ್ದಕ್ಕೆ ನವದೀಪ್‌ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ.

ಅಂದಹಾಗೆ, ಪವನ್‌ ಕಲ್ಯಾಣ್‌ ಅಭಿನಯದ ಬೀಮ್ಲಾ ನಾಯಕ್‌ ಫೆಬ್ರವರಿ 25 ರಂದು ಬಿಡುಗಡೆಯಾಗಲಿದೆ. ಆದ್ರೆ ಪವನ್‌ ಕ್ರೇಜ್‌ ತೆಲಂಗಾಣ ಹಾಗೂ ಆಂಧ್ರದಲ್ಲಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಥಿಯೇಟರ್‌ಗಳಲ್ಲಿ ಈಗಿನಿಂದಲೇ ಬುಕಿಂಗ್‌ ಶುರುವಾಗಿದೆ. ಆಂಧ್ರದಲ್ಲಿ ಸ್ಟಾರ್‌ ನಟರ ಅಭಿಮಾನಿಗಳಿಗೆ ಮೊದಲ ದಿನದ ಮೊದಲ ಶೋ ನೋಡಬೇಕೆಂಬ ಕಾತುರ. ಅದಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುವಂತಹ ಅಂಧ ಭಕ್ತರು ಅವರು. ನವದೀಪ್‌ ಕೂಡಾ ಅಅಂತಹ ಅಂಧ ಭಕ್ತನಾಗಿದ್ದು, ಹದಿಮೂರು ವರ್ಷಕ್ಕೇ ತನ್ನ ಜೀವನವನ್ನು ಕೊಣೆಗಾಣಿಸಿಕೊಂಡಿದ್ದಾನೆ.

Share Post