Cinema

ದಿವಂಗತ ಪವರ್‌ ಸ್ಟಾರ್‌ಗೆ ಕೆಎಂಎಫ್‌ ಗೌರವ ಸಮರ್ಪಣೆ

ಬೆಂಗಳೂರು: ಕರುನಾಡಿನ ಯುವರತ್ನ, ದೊಡ್ಮನೆ ಹುಡುಗ, ಅಭಿಮಾನಿಗಳ ದೇವರಾದ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಕರ್ನಾಟಕ ಹಾಲು ಒಕ್ಕೂಟ(ಕೆಎಂಎಫ್)‌ ಗೌರವವನ್ನು ಸಮರ್ಪಿಸಿದೆ. ನಂದಿನಿ ಹಾಲಿನ ಪ್ಯಾಕೆಟ್‌ ಮೇಲೆ ಅಪ್ಪು ಭಾವಚಿತ್ರವನ್ನು ಮುದ್ರಿಸಿ ರಾಜ್ಯದ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಮೊದಲು ಯಾವ ನಟ, ರಾಜಕೀಯ ವ್ಯಕ್ತಿಗೂ ಇಂತಹ ಗೌರವ ಸಮರ್ಪಣೆ ಆಗಿಲ್ಲ. ಪುನೀತ್‌ ರಾಜಕ್‌ಕುಮಾರ್‌ ಅವರ ತತ್ವಾದರ್ಶ, ಅವರ ಸರಳತೆ, ರೈತರ ಮೇಲಿನ ಕಾಳಜಿ, ಸಾಮಾಜಿಕ ಕಳಕಳಿಯೇ ಅವರಿಗೆ ಅಭಿಮಾನಿಗಳ ಮನಸಲ್ಲಿ ಅಚ್ಚಳಿಯದಂತೆ ಇದಾರೆ.

ಅಪ್ಪು ನಿಧನರಾಗಿ ಎರಡು ತಿಂಗಳು ಕಳೆದಿವೆ ಆದ್ರೂ ಅವರಿಲ್ಲ ಎನ್ನುವ ಸತ್ಯ ನಂಬಲು ಅಸಾಧ್ಯವಾಗಿದೆ. ಬಲಗೈಯಲ್ಲಿ ಮಾಡಿದ ಸಹಾಯ ಎಡಗೈಗೆ ಗೊತ್ತಾಗಬಾರದು ಎಂಬ ಮನಸ್ತತ್ವವನ್ನು ಹೊಂದಿದ್ದ ಅಪ್ಪು ರೈತರಿಗಾಗಿ ಉಚಿತ ಜಾಹೀರಾತು ನೀಡಿದ್ರು. ಒಂದು ಪೈಸೆಯೂ ತೆಗೆದುಕೊಳ್ಳದೆ ನಂದಿನಿ ಹಾಳಿನ ಉತ್ಪನ್ನಗಳ ಬ್ರಾಂಡ್‌ ಅಂಬಾಸಿಡರ್‌ ಆಗಿದ್ರು. ಇದಕ್ಕೆ ಅವರು ಒಂದೇ ಒಂದು ರೂಪಾಯಿ ಕೂಡ ಸಂಭಾವನೆ ಪಡೆದಿರಲಿಲ್ಲವಂತೆ ಅವರ ಈ ಸಹೃದಯತೆಯಿಂದ ಎಲ್ಲರೂ ಮೂಕವಿಸ್ಮಿತರಾಗುವಂತೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ವಿಶೇಷ ಗೌರವ ಸಮರ್ಪಣೆಗಾಗಿ ಕೆಎಂಎಫ್‌ ಹಾಲಿನ ಉತ್ಪನ್ನಗಳ ಮೇಲೆ ಪುನೀತ್‌ ರಾಜ್‌ಕುಮಾರ್‌ ಅವರ ಭಾವಚಿತ್ರ ಮುದ್ರಿಸಿ ಅಭಿಮಾನಿಗಳ ಮೆಚ್ಚುಗೆ ಪಡೆದಿದ್ದಾರೆ.

 

Share Post