CinemaHealth

ನಟ ವಿನೋದ್‌ ರಾಜ್‌ಗೆ ಕರುಳ ಸಂಬಂಧಿ ಸಮಸ್ಯೆ; ನೆಲಮಂಗಲದ ಆಸ್ಪತ್ರೆಗೆ ದಾಖಲು

ಬೆಂಗಳೂರು; ನಟ ವಿನೋದ್‌ ರಾಜ್‌ ಅವರು ಅನಾರೋಗ್ಯಕ್ಕೀಡಾಗಿದ್ದು, ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.. ನಟಿ ಲೀಲಾವತಿಯವರ ಪುತ್ರರಾಗಿರುವ ವಿನೋದ್‌, 11 ವರ್ಷಗಳ ಹಿಂದೆ ಹೃದ್ರೋಗ ಸಮಸ್ಯೆಗೆ ಒಳಗಾಗಿದ್ದರು.. ಆಗ ಅವರಿಗೆ ಸ್ಟಂಟ್‌ ಅಳವಡಿಸಲಾಗಿತ್ತು.. ಇದೀಗ ಇದೇ ಸ್ಟಂಟ್‌ನಿಂದಾಗಿ ಕರುಳ ಸಮಸ್ಯೆ ಉಂಟಾಗಿದೆ ಎಂದು ಹೇಳಲಾಗಿದೆ..

ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.. ಶಸ್ತ್ರಚಿಕಿತ್ಸೆಗೊಳಗಾಗಿರುವ ಅವರು ಚೇತರಿಸಿಕೊಳ್ಳುತ್ತಿದ್ದಾರೆ.. ಎರಡು ಮೂರು ದಿನಗಳಲ್ಲಿ ಅವರು ಡಿಸ್‌ಚಾರ್ಜ್‌ ಆಗಲಿದ್ದಾರೆ ಎಂದು ತಿಳಿದುಬಂದಿದೆ…

ವಿನೋದ್‌ ರಾಜ್‌ ಅವರು, ತಮ್ಮ ತಾಯಿ ಲೀಲಾವತಿ ಅವರ ಜೊತೆ ಸೋಲದೇವನಹಳ್ಳಿಯಲ್ಲಿ ತೋಟ ಖರೀದಿಸಿ ಅಲ್ಲಿಯೇ ಮನೆ ಕಟ್ಟಿಕೊಂಡು ವಾಸವಿದ್ದರು.. ಇತ್ತೀಚೆಗೆ ಅವರು ತಾಯಿಯನ್ನು ಕಳೆದುಕೊಂಡರು.. ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವ ವಿನೋದ್‌ ರಾಜ್‌ ಸೋಲದೇವನಹಳ್ಳಿ ಭಾಗದಲ್ಲಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ..

 

Share Post