BengaluruCinema

ಯುವ ರಾಜ್‌ಕುಮಾರ್‌ ವಿಚ್ಛೇದನಕ್ಕೆ ಅರ್ಜಿ; ಆ ಕಾರಣಕ್ಕಾಗಿಯೇ ಮನಸ್ತಾಪ ಬಂತಾ..?

ಬೆಂಗಳೂರು; ದೊಡ್ಮನೆ ಎಂದೇ ಹೆಸರಾಗಿರುವ ರಾಜ್‌ ಕುಮಾರ್‌ ಕುಟುಂಬದಲ್ಲಿ ಇದೇ ಮೊದಲ ಬಾರಿಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲಾಗಿದೆ.. ರಾಘವೇಂದ್ರ ರಾಜ್‌ಕುಮಾರ್‌ ಅವರ ಪುತ್ರ ಯುವ ರಾಜ್‌ಕುಮಾರ್‌ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆ.. ಯುವ ರಾಜ್‌ಕುಮಾರ್‌ ಅವರು ವಿಚ್ಛೇದನ ಕೋರಿ ಕೋರ್ಟ್‌ ಮೊರೆ ಹೋಗಿದ್ದಾರೆ..

ಪತ್ನಿಯ ವಿರುದ್ಧ ಕ್ರೌರ್ಯ, ಅಗೌರವದಿಂದ ನೋಡಿಕೊಂಡಿದ್ದಾಳೆ ಎಂದು ಆರೋಪ ಮಾಡಿರುವ ಯುವ ರಾಜ್‌ಕುಮಾರ್‌  ಪತ್ನಿಯಿಂದ ನಾನು ಮಾನಸಿಕವಾಗಿ ಟಾರ್ಚರ್ ಅನುಭವಿಸಿದ್ದೇನೆ ಎಂದು ವಿಚ್ಛೇದನಕ್ಕೆ ಕಾರಣ ಕೊಟ್ಟಿದ್ದಾರೆ.. ನಾಲ್ಕು ದಿನಗಳ ಹಿಂದೆಯೇ ಯುವ ರಾಜ್‌ ಕುಮಾರ್‌ ಅರ್ಜಿ ಸಲ್ಲಿಕೆ ಮಾಡಿದ್ದಾರೆ.. ಆದ್ರೆ ಅವರ ಪತ್ನಿ ಶ್ರೀದೇವಿ ಸದ್ಯ ಅಮೆರಿಕದಲ್ಲಿದ್ದಾರೆ.. ಅವರಿಗೆ ನೋಟಿಸ್‌ ಜಾರಿ ಮಾಡಲಾಗುತ್ತದೆ.. ಶ್ರೀದೇವಿ ಕೂಡಾ ಒಪ್ಪಿದರೆ ಮಾತ್ರ ಬೇಗ ವಿಚ್ಛೇದನ ಸಿಗುತ್ತದೆ.. ಇಲ್ಲದೇ ಹೋದರೆ, ಕೋರ್ಟ್‌ ವಿಚಾರಣೆ ಮುಗಿದ ಮೇಲೆ ಕೋರ್ಟ್‌ ನಿರ್ಧಾರದ ಮೇಲೆ ನಿಂತಿರುತ್ತದೆ..

ಶ್ರೀದೇವಿ ಭೈರಪ್ಪ ಅವರು ಮೈಸೂರು ಮೂಲದವರಾಗಿದ್ದು, ಏಳು ವರ್ಷದ ಹಿಂದೆ ಇಬ್ಬರೂ ಪರಿಚಯವಾಗಿದ್ದರು.. ಅದು ಪ್ರೀತಿಗೆ ತಿರುಗಿ, ಮನೆಯವರನ್ನು ಒಪ್ಪಿಸಿ ಮದುವೆಯಾಗಿದ್ದರು.. ನಾಲ್ಕು ವರ್ಷದ ಹಿಂದೆ ಇವರಿಗೆ ಮದುವೆಯಾಗಿತ್ತು.. ಇತ್ತೀಚೆಗೆ ಕೆಲ ತಿಂಗಳಿಂದ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು ಎನ್ನಲಾಗಿದೆ.. ಈ ಕಾರಣಕ್ಕಾಗಿಯೇ ಶ್ರೀದೇವಿ, ಯುವ ರಾಜ್‌ಕುಮಾರ್‌ ಬೇರೆ ಬೇರೆ ಇದ್ದಾರೆ ಎಂದು ಹೇಳಲಾಗುತ್ತಿದೆ.. ಶ್ರೀದೇವಿ ಸದ್ಯ ಅಮೆರಿಕದಲ್ಲಿದ್ದಾರೆ ಎಂದು ತಿಳಿದುಬಂದಿದೆ..

2016ರಲ್ಲಿ ತೆರೆಕಂಡ ಯುವ ರಾಜ್‌ಕುಮಾರ್ ಅವರ ರನ್ ಆ್ಯಂಟನಿ ಚಿತ್ರದ ನಿರ್ಮಾಣದಲ್ಲಿ ಶ್ರೀದೇವಿ ಅವರು ಭಾಗಿಯಾಗಿದ್ದರು. ರನ್ ಆ್ಯಂಟನಿ ಪ್ರಮೋಷನ್‌ನಲ್ಲೂ ಶ್ರೀದೇವಿ ಭೈರಪ್ಪ ಅವರು ತೊಡಗಿಕೊಂಡಿದ್ದರು. ಕಳೆದ ಆರೇಳು ತಿಂಗಳ ಹಿಂದೆಯೇ ಯುವ ರಾಜ್‌ಕುಮಾರ್ ಹಾಗೂ ಶ್ರೀದೇವಿ ಅವರು ದೂರ, ದೂರ ಆಗಿದ್ದರು. ಹಲವು ತಿಂಗಳಿಂದ ಯುವ ಜೊತೆ ಶ್ರೀದೇವಿ ಅವರು ಎಲ್ಲಿಯೂ ಕಾಣಿಸಿಕೊಂಡಿಲ್ಲ. ಯುವ ಸಿನಿಮಾ ಮುಹೂರ್ತದಲ್ಲಿದ್ದ ಶ್ರೀದೇವಿಯವರು ಸಿನಿಮಾ ರಿಲೀಸ್‌ನಲ್ಲಿ ಕಾಣಿಸಿಕೊಂಡಿರಲಿಲ್ಲ.

ಯುವ ರಾಜ್‌ಕುಮಾರ್‌ ಅವರಿಗೆ ನಟಿಯೊಬ್ಬರ ಜೊತೆ ಆಪ್ತತೆ ಬೆಳೆದಿದ್ದೇ ಶ್ರೀದೇವಿ ಅಸಮಾಧಾನಕ್ಕೆ ಕಾರಣ, ಇದರಿಂದಾಗಿಯೇ ಮನಸ್ತಾಪ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.. ಆದ್ರೆ, ನಿಜ ಏನು ಅನ್ನೋದರ ಬಗ್ಗೆ ಶ್ರೀದೇವಿ ಹಾಗೂ ರಾಘವೇಂದ್ರ ರಾಜ್‌ಕುಮಾರ್‌ ಕುಟುಂಬದವರೇ ಹೇಳಬೇಕಾಗಿದೆ..

 

Share Post