BengaluruCrime

ಫೇಸ್‌ಬುಕ್‌ನಲ್ಲಿ ಸ್ವಾಮೀಜಿಗೆ ಗಂಟುಬಿದ್ದ ಯುವತಿ; 35 ಲಕ್ಷ ರೂ. ದೋಖಾ

ಬೆಂಗಳೂರು; ಸ್ವಾಮೀಜಿಯೊಬ್ಬರಿಗೆ ಫೇಸ್‌ಬುಕ್‌ನಲ್ಲಿ ಪರಿಚಯವಾದ ಯುವತಿಯೊಬ್ಬಳು 35 ಲಕ್ಷ ರೂಪಾಯಿ ಮೋಸ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನೆಲಮಂಗಲದ ಕಂಬಾಳು ಮಠದ ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಮೋಸಕ್ಕೊಳಗಾದವರು.

ನೆಲಮಂಗಲದ ಶಾಖಾ ಮಠದಲ್ಲಿರುವ ಸ್ವಾಮೀಜಿಗೆ ವರ್ಷಾ ಎಂಬಾಕೆ ಫೇಸ್ ಬುಕ್ ನಲ್ಲಿ ಪರಿಚಯ ಆಗಿದ್ದಳು. ಇದೇ ವೇಳೆ ಆಕೆ ಮಠಕ್ಕೆ ಹತ್ತು ಎಕರೆ ಭೂಮಿ ಕೊಡುತ್ತೇನೆ ಎಂದು ಹೇಳಿದ್ದಳಂತೆ. ಇದನ್ನು ನಂಬಿದ ಸ್ವಾಮೀಜಿ ಆಕೆಯ ಬ್ಯಾಂಕ್‌ ಖಾತೆಗೆ 35 ಲಕ್ಷ ರೂಪಾಯಿ ಹಣವನ್ನು ಹಂತಹಂತವಾಗಿ ಹಾಕಿದ್ದಾರೆ. ಅನಂತರ ಆಕೆ ನಾಪತ್ತೆಯಾಗಿದ್ದಾಳೆ. ಈ ಸಂಬಂಧ ಸ್ವಾಮೀಜಿ ನೆಲಮಂಗಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.

ಸ್ವಾಮೀಜಿ ಈ ರೀತಿ ಹೇಳುತ್ತಿದ್ದರೂ ಇದು ಹನಿಟ್ರ್ಯಾಪ್‌ ಆಗಿರಬಹುದು ಎಂದು ಶಂಕಿಸಲಾಗುತ್ತಿದೆ. ಪೊಲೀಸರು ವರ್ಷಾಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Share Post