BengaluruPolitics

ಟಿಕೆಟ್‌ ಗೊಂದಲ ನಿವಾರಣೆ ನಮಗೆ ಗೊತ್ತಿದೆ; ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌

ಬೆಂಗಳೂರು; ಟಿಕೆಟ್‌ ಗೊಂದಲ ನಿವಾರಣೆ ಮಾಡುವುದು ನಮಗೆ ಗೊತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಹಲವು ಕಡೆಗಳಲ್ಲಿ ಹೆಚ್ಚಿನ ಟಿಕೆಟ್‌ ಆಕಾಂಕ್ಷಿಗಳಿದ್ದಾರೆ. ಟಿಕೆಟ್‌ ಸಿಗದಿದ್ದವರು ಅಸಮಾಧಾನಗೊಳ್ಳುವುದು ಸ್ವಾಭಾವಿಕ. ಆದ್ರೆ ಅವರನ್ನು ಸಮಾಧಾನಪಡಿಸಲಾಗುತ್ತದೆ. ಆ ಮೂಲಕ ಗೊಂದಲ ನಿವಾರಿಸಲಾಗುತ್ತದೆ ಎಂದು ಹೇಳಿದ್ದಾರೆ.

ನಮ್ಮ ಪಕ್ಷದಲ್ಲಿ ಶಿಸ್ತು ಮುಖ್ಯವಾಗುತ್ತದೆ. ಶಿಸ್ತು ಕಾಪಾಡಲು ಕ್ರಮ ಕೈಗೊಳ್ಳಲಾಗುತ್ತದೆ. ಇವತ್ತು ಹಾಗೂ ಮಾರ್ಚ್‌ 8ರಂದು ಸ್ಕ್ರೀನಿಂಗ್‌ ಕಮಿಟಿ ಸಭೆ ಇದೆ. ಈ ಸಭೆಯಲ್ಲಿ ಟಿಕೆಟ್‌ ಹಂಚಿಕೆ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ಹೇಳಿದರು. ಅಸಮಾಧಾನ ಇರುವ ಕಡೆ ನಾನು ಹಾಗೂ ಸಿದ್ದರಾಮಯ್ಯ ಸೇರಿ ಸಂಧಾನ ಸಭೆಗಳನ್ನು ನಡೆಸುತ್ತೇವೆ. ಅಸಮಧಾನಿತರನ್ನು ಸಮಾಧಾನಪಡಿಸುತ್ತೇವೆ. ನಮ್ಮ ಸರ್ಕಾರ ಬಂದರೆ 20 ಜನರನ್ನು ಎಂಎಲ್‌ಸಿ ಮಾಡಲು ಅವಕಾಶವಿದೆ. ಜೊತೆಗೆ ನಿಗಮ, ಮಂಡಳಿಗಳಿಗೆ ನೇಮಿಸಲು ಅವಕಾಶವಿದೆ. ಅವಕಾಶ ವಂಚಿತರಿಗೆ ಎಂಎಲ್‌ಸಿ ಅಥವಾ ನಿಗಮನ ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡಲಾಗುತ್ತದೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

Share Post