Bengaluru

ಟಿವಿಎಸ್‌ ಮೊಪೆಡ್‌ಗಳೇ ಈತನ ಟಾರ್ಗೆಟ್‌; ಕದ್ದ ವಾಹನ ಏನು ಮಾಡುತ್ತಿದ್ದ ಗೊತ್ತಾ..?

ಬೆಂಗಳೂರು:  ರೈತನ ಸೋಗಿನಲ್ಲಿ ಬಂದು ಟಿವಿಎಸ್ ಮೊಪೆಡ್ ಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಆರೋಪಿಯನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶ್ರೀನಿವಾಸ್ ಅಲಿಯಾಸ್ ಸೀನಾ ಬಂಧಿತ ಆರೋಪಿಯಾಗಿದ್ದು, ಈತ ತುಮಕೂರು ಗುಬ್ಬಿ ಮೂಲದವನು ಎನ್ನಲಾಗಿದೆ.

ಈತ ಗುಬ್ಬಿಯಿಂದ ಪಂಚೆ ಉಟ್ಕೊಂಡು ಬಸ್ ನಲ್ಲಿ ಬೆಂಗಳೂರಿಗೆ ಬರುತ್ತಿದ್ದ. ಬಳಿಕ ಒಂದೊಂದೆ ಮೊಪೆಡ್ ಗಳನ್ನು ಕದ್ದು ಎಸ್ಕೇಪ್ ಆಗುತ್ತಿದ್ದ. ಈ ಸಂಬಂಧ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ 5 ಲಕ್ಷದ 20 ಸಾವಿರ ಮೌಲ್ಯದ 10 ಟಿವಿಎಸ್ ಮೊಪೆಡ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನೂ ಬಂಧಿತ ಆರೋಪಿ ಕದ್ದ ವಾಹನಗಳನ್ನು ಹಳ್ಳಿಯ ರೈತರಿಗೆ ಮಾರಾಟ ಮಾಡುತ್ತಿದ್ದ ಎಂದು ವಿಚಾರಣೆಯಲ್ಲಿ ತಿಳಿದು ಬಂದಿದೆ. ಆರೋಪಿ ವಿರುದ್ಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share Post