BengaluruCrime

ಚಪ್ಪಲಿ ಸ್ಟ್ಯಾಂಡ್‌ ಹಾಗೂ ಹೂ ಕುಂಡಗಳಲ್ಲಿ ಬೀಗ ಇಟ್ಟರೆ ಹುಷಾರ್

ಬೆಂಗಳೂರು; ಬೇಗೂರು ಪೊಲೀಸರ ಕಾರ್ಯಾಚರಣೆಯಂದ ಕುಖ್ಯಾತ ಕನ್ನ ಕಳವು ಆರೋಪಿಯನ್ನ ಬಂಧಿಸಲಾಗಿದೆ.
ನವಾಜ್ ಶರೀಪ್ ಬಂಧಿತ ಆರೋಪಿ. ಈತ ಚಪ್ಪಲಿ ಸ್ಟ್ಯಾಂಡ್‌ ಹಾಗೂ ಹೂ ಕುಂಡಗಳಲ್ಲಿ ಬೀಗ ಇಟ್ಟು ಹೋಗುತ್ತಿದ್ದ ಮನೆಗಳನ್ನ ಟಾರ್ಗೇಟ್ ಮಾಡ್ತಿದ್ದ. ಮನೆಯವರು ಬೀಗ ಇಟ್ಟು ಕೆಲಸಕ್ಕೆ ಹೋಗ್ತಿದ್ದಂತೆ ಅಲ್ಲಿಗೆ ಎಂಟ್ರಿಯಾಗುತ್ತಿದ್ದ. ಬೀಗದಿಂದ ಬಾಗಿಲು ತೆಗೆದು ಕಳವು ಮಾಡುತ್ತಿದ್ದ.

ಆರೋಪಿಯ ಬಂಧನದಿಂದ 9 ಮನೆಗಳವು ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಆರೋಪಿ ವಿರುದ್ದ ಇಲ್ಲೀತನಕ 27 ಪ್ರಕರಣಗಳು ದಾಖಲಾಗಿದೆ. ಬಂಧಿತನಿಂದ ಒಟ್ಟು 16 ಲಕ್ಷ ಮೌಲ್ಯದ ಚಿನ್ನಾಭರಣನ್ನ ಬೇಗೂರು ಪೊಲೀಸರು ವಶ ಪಡಿಸಿಕಂಡು ಪ್ರಕರಣ ದಾಖಲು ಮಾಡಿದ್ದಾರೆ.

Share Post