Bengaluru

ಬಟ್ಟೆ ಅಂಗಡಿಯಲ್ಲಿ ಗ್ರಿಲ್ ಮುರಿದು ಕಳ್ಳತನ; ತಿಂಗಳ ನಂತರ ಆರೋಪಿ ಅರೆಸ್ಟ್‌

ಬೆಂಗಳೂರು: ಬಟ್ಟೆ ಅಂಗಡಿಯಲ್ಲಿ ಗ್ರಿಲ್‌ ಮುರಿದು ಕಳ್ಳತನ ಮಾಡಿದ್ದ ಖತರ್ನಾಕ್ ಆರೋಪಿಯನ್ನು ಮಲ್ಲೇಶ್ವರಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜಿಗಣಿ ಮೂಲದ ಆನಂದ್ ಬಂಧಿತ ಆರೋಪಿ.

ಈತ ಜನವರಿ 31 ರಂದು ಸಂಪಿಗೆ ರಸ್ತೆಯ ಪ್ರಶಾಂತಿ ಸ್ಯಾರಿ ಸೆಂಟರ್ ನ ಐದನೇ ಮಹಡಿಯ ಗ್ರಿಲ್ ಮುರಿದು ಕಳ್ಳತನ ಮಾಡಿದ್ದ. ಅಂಗಡಿಯ ಡ್ರಾಯರ್ ನಲ್ಲಿದ್ದ 6.50 ಲಕ್ಷದ ಹಣವನ್ನು ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದ. ಈ ಸಂಬಂಧ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರಿನ ಅನ್ವಯ ವಿಚಾರಣೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಬಂಧಿತರಿಂದ 5.8 ಲಕ್ಷ ನಗದನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೇ ಈತ ನಗರದ ಹಲವು ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿರುವುದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

Share Post