BengaluruCrime

ಟ್ರಿಪ್‌ ಹೋಗಿದ್ದ ಪತ್ನಿ ಇನ್ನೂ ಬಂದಿಲ್ಲ; ಪತಿಯಿಂದ ಹೈಡ್ರಾಮಾ

ಬೆಂಗಳೂರು; ಶಕ್ತಿ ಯೋಜನೆ ಜಾರಿಯಾದ ಮೇಲೆ ಮಹಿಳೆಯರು ಸರ್ಕಾರಿ ಬಸ್‌ಗಳನ್ನು ಹೆಚ್ಚು ಪ್ರಯಾಣ ಮಾಡುತ್ತಿದ್ದಾರೆ. ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಹಾಗೆ ಹೋದ ಪತ್ನಿ ವಾಪಸ್‌ ಬಂದಿಲ್ಲ ಅಂತ ಪತಿಯೊಬ್ಬ ಹೈಡ್ರಾಮಾ ಮಾಡಿದ್ದಾನೆ. ಬಸ್‌ ಟೈರ್‌ ಕೆಳಗೆ ತಲೆ ಇಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಬೆಂಗಳೂರು ಸಮೀಪದ ಹೊಸಕೋಟೆ ಬಸ್‌ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಇದರಿಂದಾಗಿ ಅರ್ಧ ಗಂಟೆಗೂ ಹೆಚ್ಚು ಕಾಲ ಬಸ್‌ ಸಂಚಾರ ಸ್ಥಗಿತವಾಗಿತ್ತು. ಇದ್ರಿಂದ ಪ್ರಯಾಣಿಕರು ಪರದಾಡಬೇಕಾಯಿತು. ಕಂಠಪೂರ್ತಿ ಕುಡಿದಿದ್ದ ಆ ವ್ಯಕ್ತಿ ಬಸ್‌ ಒಂದರ ಟೈಯರ್‌ ಕೆಳಗೆ ತಲೆ ಇಟ್ಟು ಮಲಗಿದ್ದಾನೆ. ಆತನನ್ನು ಸಮಾಧಾನಪಡಿಸಿ ಅಲ್ಲಿಂದ ಹೊರತರೋಕೆ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಹಾಗೂ ಸಾರ್ವಜನಿಕರು ಹರಸಾಹಸಪಟ್ಟಿದ್ದಾರೆ.

ನನ್ನ ಉಚಿತ ಇದೆ ಎಂದು ಟ್ರಿಪ್‌ ಹೋಗಿದ್ದಾಳೆ. ಆದ್ರೆ ಇದುವರೆಗೂ ವಾಪಸ್‌ ಬಂದಿಲ್ಲ. ಸಿದ್ದರಾಮಯ್ಯ ಸರಿಯಿಲ್ಲ. ಮಹಿಳೆಯರಿಗೆ ಈ ಉಚಿತ ಪ್ರಯಾಣ ಯೋಜನೆಯನ್ನು ರದ್ದುಗೊಳಿಸಬೇಕೆಂದು ಆತ ಆಗ್ರಹಿಸಿದ್ದಾನೆ. ಇದೀಗ ಆತ ಹೊಸಕೋಟೆ ಪೊಲೀಸರ ಅಧೀನದಲ್ಲಿದ್ದಾನೆ.

Share Post