Bengaluru

10 ನಿಮಿಷ ತಡವಾಗಿದ್ದಕ್ಕೆ ಬಿಟ್ಟುಹೋದ ವಿಮಾನ; ರಾಜ್ಯಪಾಲ ಥಾವರ್‌ ಚಂದ್ ಕೋಪ

ಬೆಂಗಳೂರು; ನಿನ್ನೆ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಬೆಂಗಳೂರಿನಿಂದ ಹೈದರಾಬಾದ್‌ಗೆ ತೆರಳಬೇಕಿತ್ತು. ಆದ್ರೆ ಅವರು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹತ್ತು ನಿಮಷ ತಡವಾಗಿ ಆಗಮಿಸಿದ್ದಾರೆ. ಹೀಗಾಗಿ ವಿಮಾನ ಅವರನ್ನು ಬಿಟ್ಟು ಟೇಕಾಫ್‌ ಆಗಿದೆ. ಇದರಿಂದ ರಾಜ್ಯಪಾಲರು ಆಕ್ರೋಶಗೊಂಡಿದ್ದಾರೆ. ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಹತ್ತು ನಿಮಷ ತಡವಾದರೆ ಕಾಯಬೇಕಿತ್ತು ಎಂದಿರುವ ರಾಜ್ಯಪಾಲರು. ನಾನು ರಾಜ್ಯದ ಪ್ರಥಮ ವ್ಯಕ್ತಿ. ಶಿಷ್ಟಾಚಾರ ಉಲ್ಲಂಘಿಸಿದವರ ವಿರುದ್ಧ ಕ್ರಮ ಆಗಬೇಕು. ನನಗೆ ಅಗೌರವ ತರಲಾಗಿದೆ ಎಂದು ಗರಂ ಆಗಿ ಮಾತನಾಡಿದ್ದಾರೆ. ನಿನ್ನೆ ಮಧ್ಯಾಹ್ನ 2 ಗಂಟೆಗೆ ಸುಮಾರಿಗೆ ಏರ್‌ಏಷ್ಯಾ ವಿಮಾನದ ಮೂಲಕ ರಾಜ್ಯಪಾಲ ಗೆಹ್ಲೋಟ್‌ ಅವರು ಹೈದರಾಬಾದ್‌ಗೆ ತೆರಳಬೇಕಿತ್ತು. ಆದ್ರೆ ಅವರು ಹತ್ತು ನಿಮಿಷ ತಡವಾಗಿ ವಿಮಾನ ನಿಲ್ದಾಣ ತಲುಪಿದ್ದರಿಂದ, ವಿಮಾನ ಸಮಯಕ್ಕೆ ಸರಿಯಾಗಿ ಟೇಕಾಫ್‌ ಆಗಿದ್ದು, ರಾಜ್ಯಪಾಲರ ಆಕ್ರೋಶಕ್ಕೆ ಕಾರಣವಾಗಿದೆ.

Share Post