BengaluruPolitics

ದೇಶಕ್ಕೆ ಮೋದಿಯವರ ನಾಯಕತ್ವದ ಅವಶ್ಯಕತೆ ಇದೆ; ಜಗದೀಶ್‌ ಶೆಟ್ಟರ್‌

ಬೆಂಗಳೂರು; ದೇಶಕ್ಕೆ ನರೇಂದ್ರ ಮೋದಿಯವರ ನಾಯಕತ್ವದ ಅವಶ್ಯಕತೆ ಇದೆ. ಇದಕ್ಕಾಗಿಯೇ ನಾನು ನನ್ನ ಮಾತೃಪಕ್ಷಕ್ಕೆ ವಾಪಸ್‌ ಆಗಿದದ್ದೇನೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಅಯೋಧ್ಯೆ ರಾಮಮಂದಿರದ ಹೋರಾಟದಲ್ಲಿ ನಾನೂ ಕೂಡಾ ಭಾಗವಹಿಸಿದ್ದೆ. ರಾಮ ಮಂದಿರಕ್ಕಾಗಿ ಹಣ ಸಂಗ್ರಹಣೆ ಕೂಡಾ ಮಾಡಿದ್ದೆವು. ಹೀಗಾಗಿ, ಮೋದಿಯವರ ನಾಯಕತ್ವಕ್ಕೆ ಮನಸೋತಿದ್ದೇನೆ. ಅವರ ಕೈಬಲಪಡಿಸಲು ಕೆಲಸ ಮಾಡುತ್ತೇನೆ ಎಂದರು.
ನನ್ನ ತಂದೆ ಕೂಡಾ ಜನಸಂಘದಿಂದ ಸಂಘ ಪರಿವಾರದಲ್ಲಿ ಕೆಲಸ ಮಾಡಿಕೊಂಡು ಬಂದವರು. ನಾನು ಅನಿವಾರ್ಯ ಕಾರಣಕ್ಕಾಗಿ ಕಾಂಗ್ರೆಸ್‌ ಸೇರಿದ್ದೆ. ಆದ್ರೆ ಇತ್ತೀಚೆಗೆ ಕಾರ್ಯಕರ್ತರು, ಬಿಜೆಪಿ ನಾಯಕರು ವಾಪಸ್‌ ಬರುವಂತೆ ಮನವಿ ಮಾಡುತ್ತಾ ಬಂದಿದ್ದರು. ಇದೀಗ ಲೋಕಸಭಾ ಚುನಾವಣೆ ಹತ್ತಿರವಿದೆ. ಈ ವೇಳೆ ನಾನು ನಮ್ಮ ಮನೆಯಲ್ಲಿರುವುದು ಒಳ್ಳೆಯದು ಎನಿಸಿತು. ಮೋದಿಯವರು ಮತ್ತೆ ಪ್ರಧಾನಿಯಾಗಬೇಕು ಎಂಬ ಆಸೆ ನನ್ನದು ಎಂದು ಶೆಟ್ಟರ್‌ ಹೇಳಿದರು.

Share Post