BengaluruCinema

ಸೂಕ್ತ ಅವಕಾಶ ಸಿಗದ ಹಿನ್ನೆಲೆ; ನಟ ಸಂಪತ್‌ ಆತ್ಮಹತ್ಯೆ

ಬೆಂಗಳೂರು; ಸಿನಿಮಾ ಹಾಗೂ ಕಿರುತೆರೆ ನಟ ಸಂಪತ್‌ ಜಯರಾಮ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ರಾತ್ರಿ ಅವರು ನೆಲಮಂಗಲದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಚಿತ್ರರಂಗದಲ್ಲಿ ಸೂಕ್ತ ಅವಕಾಶ ಸಿಗದಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಸಂಪತ್‌ ಜಯರಾಮ್‌ ಅವರು ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಮನೆಮಾತಾಗಿದ್ದರು. ಬಾಲಾಜಿ ಫೋಟೋ ಸ್ಟುಡಿಯೋ ಎಂಬು ಸಿನಿಮಾದಲ್ಲಿ ಕೂಡಾ ನಟಿಸಿದ್ದರು. ಅವರ ನಟನೆಯನ್ನು ಲಕ್ಷಾಂತರ ಜನ ಮೆಚ್ಚಿದ್ದರು.

ನೈಜ ನಟನೆ ಮೂಲಕ ಹೆಸರಾಗಿದ್ದ ಸಂಪತ್‌ ಜಯರಾಮ್‌ ಅವರಿಗೆ ಸರಿಯಾಗಿ ಅವಕಾಶಗಳು ಸಿಗುತ್ತಿರಲಿಲ್ಲ. ಹೀಗಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಂಪತ್‌ ಜಯರಾಮ್‌ ಅವರು ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದರು ಎಂದು ತಿಳಿದುಬಂದಿದೆ.

 

Share Post