BengaluruPolitics

ಕಾಂಗ್ರೆಸ್‌ ನಾಯಕರ ಮಾತು ಕೇಳಿ ಕೆಂಪಣ್ಣ ಆರೋಪ; ಸಚಿವ ಡಾ.ಕೆ.ಸುಧಾಕರ್‌

ಬೆಂಗಳೂರು; ಗುತ್ತಿಗೆದಾರರಿಂದ ಐವತ್ತು ಪರ್ಸೆಂಟ್‌ ಕಮೀಷನ್‌ ಪಡೆಯಲಾಗುತ್ತಿದೆ ಎಂದು ಗುತ್ತಿಗೆದಾರರ ಸಂಘ ಆರೋಪಿಸಿರುವುದು ಸುಳ್ಳು. ಇದನ್ನು ನೂರಕ್ಕೆ ನೂರು ಕಾಂಗ್ರೆಸ್‌ ನಾಯಕರೇ ಮಾಡಿಸ್ತಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷದ ಕೈಗೊಂಬೆಯಾಗಿ ಕೆಂಪಣ್ಣ ಆರೋಪ ಮಾಡುತ್ತಿದ್ದಾರೆ. ವಿಪಕ್ಷ ನಾಯಕರ ಮನೆಗೆ ಹೋಗಿ ಬಂದು ಆರೋಪ ಮಅಡಲಾಗಿದೆ. ಹಿರಿಯರಾದ ಕೆಂಪಣ್ಣ ಬಲಿ ಕೊಡುವ ಕೆಲಸ ನಡೀತಿದೆ. ಕೆಂಪಣ್ಣ ಅವರು ಇದಕ್ಕೆ ಬಲಿಯಾಗಬಾರದು ಎಂದು ಸಚಿವ ಸುಧಾಕರ್‌ ಸಲಹೆ ನೀಡಿದ್ದಾರೆ.

Share Post