Bengaluru

ಸಿದ್ದರಾಮಯ್ಯ ಮೀರ್‌ ಸಾದಿಕ್‌ ಎಂದ ರಾಜ್ಯ ಬಿಜೆಪಿ; ಟ್ವೀಟ್‌ನಲ್ಲೇನಿದೆ..?

ಬೆಂಗಳೂರು: ಹುಬ್ಬಳ್ಳಿ ಗಲಭೆ ಹಿನ್ನೆಲೆಯಲ್ಲಿ ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ, ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದೆ. ಅಷ್ಟೇ ಅಲ್ಲ, ಸಿದ್ದರಾಮಯ್ಯ ಅವರನ್ನು ಪರೋಕ್ಷವಾಗಿ ಮೀರ್‌ ಸಾದಿಕ್‌ ಎಂದು ಸಂಬೋಧಿಸಲಾಗಿದೆ.

 

ಬಿಜೆಪಿ ಕರ್ನಾಟಕ ಟ್ವಿಟರ್‌ ಖಾತೆಯಲ್ಲಿ ಬರೆಯಲಾದ ಟ್ವೀಟ್‌ಗಳು ಹೀಗೆವೆ..

 

  ಡಿಜೆ ಹಳ್ಳಿ ಗಲಭೆ √ ಕಾಂಗ್ರೆಸ್ ನಾಯಕರ ಪಿತೂರಿ √ ಪೋಲಿಸ್ ಠಾಣೆಯ ಮೇಲೆ ದಾಳಿ √ ವಾಹನಗಳಿಗೆ ಬೆಂಕಿ ಹುಬ್ಬಳ್ಳಿ ಗಲಭೆ √ ಕಾಂಗ್ರೆಸ್ ನಾಯಕರ ಪಿತೂರಿ √ ಪೊಲೀಸರ ಮೇಲೆ ಹಲ್ಲೆ √ ಲೋಡುಗಟ್ಟಲೆ ಕಲ್ಲು ಸಂಗ್ರಹ √ ವಾಹನಗಳಿಗೆ ಹಾನಿ ಈ ಗಲಭೆಯಲ್ಲಿ #ಮೀರ್‌ಸಾದಿಕ್ ಹಾಗೂ ಭ್ರಷ್ಟಾಧ್ಯಕ್ಷ ರ ಪಾತ್ರವೇನು?

 

ಈ ಹಿಂದೆ #ಮೀರ್‌ಸಾದಿಕ್ ಸಿಎಂ ಆಗಿದ್ದ ಅವಧಿಯಲ್ಲಿ ತರಬೇತಿ ಕೊಟ್ಟು ಹೊರಬಿಟ್ಟ ಪಿಎಫ್‌ಐ ಅಲ್ಪಮತೀಯವಾದಿಗಳೇ ಹುಬ್ಬಳ್ಳಿ ಗಲಭೆಗೆ ನೇರ ಕಾರಣ. ಪೊಲೀಸ್ ಬಂಧನದಲ್ಲಿದ್ದವರನ್ನು ನನ್ನ ಕೈಗೊಪ್ಪಿಸಿ ಎಂದು ಅಬ್ಬರಿಸುವ ಇವರಿಗೆ ಕಾನೂನು‌ ಕೈಗೆತ್ತಿಕೊಳ್ಳುವುದು ಹುಟ್ಟು ಚಾಳಿಯೇ?

Share Post