Bengaluru

ಬೆಂಗಳೂರಿಗೆ ತಂಪೆರದ ಮಳೆರಾಯ; ಎಲ್ಲೆಲ್ಲಿ ಮಳೆಯಾಯ್ತು..?

ಬೆಂಗಳೂರು; ಕೊನೆಗೂ ಬೆಂಗಳೂರಿಗೆ ಮಳೆಯ ಸಿಂಚನವಾಗಿದೆ.. ಗುಡುಗು ಸಹಿತ ಮಳೆಯಾಗುತ್ತಿದ್ದು, ಕಾದಿದ್ದ ಇಳೆಗೆ ತಂಪೆರೆದಿದೆ..

  ಗುಡುಗು, ಮಿಂಚು ಜೋರು ಮಳೆ ಸುರಿದಿದೆ. ವಿಜಯನಗರ, ಆರ್ಪಿಸಿ ಲೇಔಟ್, ಚಂದ್ರಾಲೇಔಟ್ ಮುಂತಾದ ಜೋರು ಮಳೆ ಬಿದ್ದಿದೆ. ಫ್ರೇಜರ್ ಟೌನ್​, ರಿಚ್ಮಂಡ್ ಟೌನ್​ ಸೇರಿದಂತೆ ಹಲವೆಡೆ ದಿಢೀರ್​ ಮಳೆಯಿಂದ ವಾಹನ ಸವಾರರು ಪರದಾಡುವಂತಾಗಿದೆ.

  ಇಂದು ಮಧ್ಯಾಹ್ನ ಕೋಲಾರ ಜಿಲ್ಲೆಯ ಕೆಜಿಎಫ್ ನಗರದಲ್ಲಿ‌ ಮಳೆಯ ಸಿಂಚನವಾಗಿದೆ. ಬಿಸಿಗಾಳಿ, ಒಣ ಹವೆಯಿಂದ ಬೇಸತ್ತು ಹೋಗಿದ್ದ ವಾತಾವರಣ ತಣ್ಣಗಾಗಿದೆ. ಕಳೆದೊಂದು ವರ್ಷದಿಂದ ಮಳೆ ಕಾಣದೆ ಬರಡಾಗಿ ಹೋಗಿದ್ದ ಭೂಮಿ, ಇದ್ದಕ್ಕಿದ್ದಂತೆ ಸುರಿದ ಮಳೆ‌‌ ಹನಿಗೆ ತಂಪಾಗಿದೆ.  ಮಳೆ‌ ಹನಿ ಕಂಡು ಕೆಜಿಎಫ್ ಜನ ನಿಟ್ಟುಸಿರು ಬಿಟ್ಟಿದ್ದಾರೆ.

Share Post