Bengaluru

ಸಿದ್ದರಾಮಯ್ಯ ನೂರು ಟ್ರೈನ್‌ ತಂದು ಟಿಪ್ಪು ಹೆಸರಿಡಲಿ; ಅಶೋಕ್‌

ಬೆಂಗಳೂರು; ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇನ್ನು ನೂರು ಟ್ರೈನ್ ತಂದು ಟಿಪ್ಪು ಸುಲ್ತಾನ್, ಬಿನ್​ ಲಾಡೆನ್, ಘಜನಿ ಮೊಹಮ್ಮದ್ ಹೆಸರಿಟ್ಟು ಓಡಿಸಿಕೊಳ್ಳಲಿ ಎಂದು ಸಚಿವ ಆರ್.ಅಶೋಕ್ ಟಾಂಗ್ ನೀಡಿದ್ದಾರೆ. ವಿಧಾನಸೌಧದಲ್ಲಿ ಟಿಪ್ಪು ಎಕ್ಸ್‌ಪ್ರೆಸ್‌ ರೈಲಿನ ಹೆಸರು ಬದಲಾಯಿಸಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರ ಒಳ್ಳೆಯ ಉದ್ದೇಶದಿಂದ ಟಿಪ್ಪು ಹೆಸರು ತೆಗೆದು ಒಡೆಯರ್ ಹೆಸರಿಟ್ಟಿದೆ ಎಂದು ಹೇಳಿದರು.

  ಒಡೆಯರ್‌ ಅವರು ಮೈಸೂರು, ಮಂಡ್ಯ ಭಾಗಗಳಿಗೆ ನೀರುಕೊಟ್ಟರು, ಅರಮನೆಯ ಒಡವೆ ಮಾರಿ ಕೆಆರ್‌ಎಸ್ ಕಟ್ಟಿಸಿದರು ಹೀಗೆ ನೂರಾರು ಯೋಜನೆಗಳನ್ನು ತಂದಿದ್ದಾರೆ. ಹೀಗಾಗಿ ರೈಲಿಗೆ ಒಡೆಯರ್‌ ಹೆಸರಿಟ್ಟಿರುವುದು ಸರಿಯಾಗಿದೆ ಎಂದು ಹೇಳಿದರು.

  ಟಿಪ್ಪು ಆಡಳಿತ ಭಾಷೆ ಪರ್ಶಿಯನ್ ಆಗಿತ್ತು. ಆತ ಜನರನ್ನು ಕಗ್ಗೊಲೆ ಮಾಡುತ್ತಿದ್ದ, ಬಲವಂತವಾಗಿ ಮತಾಂತರ ಮಾಡುತ್ತಿದ್ದ. ಚಲುವನಾರಾಯಣಸ್ವಾಮಿ ದೇವಸ್ಥಾನದ ಬಳಿ ಕೊಗ್ಗೊಲೆ ಮಾಡಿದ್ದಾನೆ. ಹಾಗಾಗಿ ನಮ್ಮ ಆಯ್ಕೆ ಒಡೆಯರ್ ಅನ್ನೋದೇ ಆಗಿದೆ ಎಂದು ಸಚಿವ ಅಶೋಕ್‌ ಹೇಳಿದರು.

Share Post