BengaluruPolitics

ಸದನದಲ್ಲಿ ನೂಕಾಟ ತಳ್ಳಾಟ; ಕುಸಿದುಬಿದ್ದ ಶಾಸಕ ಯತ್ನಾಳ್‌

ಬೆಂಗಳೂರು; ಹತ್ತು ಶಾಸಕರನ್ನು ಕಲಾಪದಿಂದ ಅಮಾನತು ಮಾಡಿದ್ದಕ್ಕೆ ಬಿಜೆಪಿ ಶಾಸಕರು ಪ್ರತಿಭಟನೆ ನಡೆಸಿದ್ದು, ಈ ವೇಳೆ ಮಾರ್ಷಲ್‌ಗಳ ಎಳೆದಾಟದ ವೇಳೆ ಹಿರಿಯ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಕುಸಿದುಬಿದ್ದಿದ್ದಾರೆ. ಅಸ್ವಸ್ಥಗೊಂಡ ಅವರನ್ನು ವೀಲ್‌ ಚೇರ್‌ ಮೂಲಕ ಹೊರಗೆ ಕರೆತಂದು ಅಲ್ಲಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಸ್ಪೀಕರ್‌ಗೆ ಅಗೌರವ ತೋರಿಸಿದ ಹಿನ್ನೆಲೆಯಲ್ಲಿ ಸ್ಫಿಕರ್‌ ಖಾದರ್‌ ಅವರು ಹತ್ತು ಬಿಜೆಪಿ ಶಾಸಕರನ್ನು ಅಮಾನತು ಮಾಡಿದ್ದಾರೆ. ಇದಾದ ಮೇಲೂ ಬಿಜೆಪಿ ಶಾಸಕರು ಸದನದೊಳಗೆ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಮಾರ್ಷಲ್‌ಗಳು ಅಮಾನತಾದ ಶಾಸಕರನ್ನು ಹೊರಹಾಕುವ ವೇಳೆ ಬಸನಗೌಡ ಪಾಟೀಲ್‌ ಯತ್ನಾಳ್‌ ಕುಸಿದುಬಿದ್ದಿದ್ದಾರೆ.

ಪೋರ್ಟಿಸ್‌ ಆಸ್ಪತ್ರೆಯಲ್ಲಿ ಯತ್ನಾಳ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೊಂದೆಡೆ, ಬಿಜೆಪಿ ಶಾಸಕರು ಸ್ಪೀಕರ್‌ ಕಚೇರಿ ಎದುರು ಧರಣಿ ಮಾಡುತ್ತಿದ್ದಾರೆ. ಅಮಾನತು ಆದೇಶ ಹಿಂಪಡೆಯಬೇಕೆಂದು ಆಗ್ರಹಿಸುತ್ತಿದ್ದಾರೆ.

Share Post