BengaluruPolitics

ಮಹಾಮೈತ್ರಿ ಸಭೆಗೆ ಐಎಎಸ್‌ ಅಧಿಕಾರಿಗಳ ಬಳಕೆ; ವಿಧೇಯಕ ಪ್ರತಿಗಳನ್ನು ಸ್ಪೀಕರ್‌ ಮೇಲೆಸೆದ ವಿಪಕ್ಷಗಳು

ಬೆಂಗಳೂರು; ಮಹಾಮೈತ್ರಿ ಸಭೆಗೆ ಆಗಮಿಸಿದ್ದ ಹೊರ ರಾಜ್ಯದ ನಾಯಕರನ್ನು ಸ್ವಾಗತಿಸಲು ಐಎಎಸ್‌ ಅಧಿಕಾರಿಗಳನ್ನು ಬಳಸಿಕೊಂಡ ವಿಚಾರ ವಿಧಾನಸಭಾ ಕಲಾಪದಲ್ಲಿ ಕೋಲಾಹಲಕ್ಕೆ ಸಾಕ್ಷಿಯಾಗಿಯಾಯಿತು. ವಿಪಕ್ಷಗಳು ವಿಚಾರ ಪ್ರಸ್ತಾಪ ಮಾಡಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದವು. ಇದೇ ವೇಳೆ ಕೆಲಸದಸ್ಯರು ವಿಧೇಯಕದ ಪ್ರತಿಗಳನ್ನು ಹರಿದು ಸ್ಪೀಕರ್‌ ಮೇಲೆ ಎಸೆದಿದ್ದಾರೆ.

ವಿಧಾನಸಭಾ ಕಲಾಪದಲ್ಲಿ ಆರ್‌.ಅಶೋಕ್‌ ಈ ವಿಚಾರವನ್ನು ಪ್ರಸ್ತಾಪ ಮಾಡಿದರು. ಗಣ್ಯರನ್ನು ಹೋಟೆಲ್‌ಗೆ ಕರೆತರಲು ಐಎಎಸ್‌ ಅಧಿಕಾರಿಗಳನ್ನು ಬಳಸಿಕೊಳ್ಳಲಾಗಿದೆ. ಇದು ಯಾವ ಕಾನೂನಿನಲ್ಲಿದೆ ಎಂದು ಪ್ರಶ್ನೆ ಮಾಡಿದರು. ಈ ವಿಚಾರವಾಗಿ ಗದ್ದಲ ಉಂಟಾಗಿತು. ಇದೇ ವೇಳೆ ಬಿಜೆಪಿಯ ಕೆಲ ಸದಸ್ಯರು, ಪ್ರತಿಗಳನ್ನು ಹರಿದು ಸ್ಪೀಕರ್‌ ಮೇಲೆ ಎಸೆದಿದ್ದಾರೆ.

Share Post